Karnataka Bandh; ನಾಡು-ಜಲ-ನೆಲದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ, ಕಾವೇರಿ ನಮ್ಮದು: ತನ್ವೀರ್ ಪಾಶಾ, ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
Karnataka Bandh: ನಾಳೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕ್ಯಾಬ್ ಗಳನ್ನು ರಸ್ತೆಗಿಳಿಸದೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಪಾಶಾ ಹೇಳಿದರು. ಅವರು ಹೇಳುವ ಪ್ರಕಾರ ಶುಕ್ರವಾರದಂದು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಆಟೋಗಳು ಹಾಗೂ ಸುಮಾರು 50,000 ಕ್ಯಾಬ್ ಗಳು ಪಾರ್ಕ್ ಆದ ಸ್ಥಳಗಳಿಂದ ಕದಲುವುದಿಲ್ಲ.
ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಕನ್ನಡ ಪರ ಸಂಘಟನೆಗಳು (Pro Kannada organisations) ನಾಳೆ ಅಖಂಡ ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಿದ್ದು ಬಹುತೇಕ ಸೇವೆಗಳು ಸ್ತಬ್ಧಗೊಳ್ಳಲಿವೆ. ಌಪ್-ಆಧಾರಿತ ಕ್ಯಾಬ್ ಗಳು ನಾಳೆ ರಸ್ತೆಗಿಳಿಯಲ್ಲ ಎಂದು ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ರಾಜ್ಯಾಧ್ಯಕ್ಷ ತನ್ವೀರ್ ಪಾಶಾ (Tanveer Pasha ) ಹೇಳಿದ್ದಾರೆ. ನಾಳಿನ ಹೋರಾಟ ರಾಜ್ಯದ ಜೀವನದಿ ಕಾವೇರಿಯ ನೀರಿಗಾಗಿ ನಡೆಸಲಾಗುತ್ತಿದೆ, ನಾಡು-ಜಲ-ನೆಲದ ವಿಷಯ ಬಂದಾಗ ಯಾವುದೇ ರಾಜಿಯಿಲ್ಲ, ಓಲಾ-ಊಬರ್ ಸಂಸ್ಥೆಗಳು ಹೋರಾಟದಲ್ಲಿ ಪಾಲ್ಗೊಂಡು ಕಾವೇರಿ ನೀರು ನಮ್ಮದು ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಿವೆ, ನಾಳೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕ್ಯಾಬ್ ಗಳನ್ನು ರಸ್ತೆಗಿಳಿಸದೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಪಾಶಾ ಹೇಳಿದರು. ಅವರು ಹೇಳುವ ಪ್ರಕಾರ ಶುಕ್ರವಾರದಂದು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಆಟೋಗಳು ಹಾಗೂ ಸುಮಾರು 50,000 ಕ್ಯಾಬ್ ಗಳು ಪಾರ್ಕ್ ಆದ ಸ್ಥಳಗಳಿಂದ ಕದಲುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್

ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ

ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
