AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಸೇನೆಯಿಂದ ಮುಂದುವರಿದ ಅಪ್ರಚೋದಿತ ಗುಂಡಿನ ದಾಳಿ, ಭಾರತೀಯ ಸೇನೆಯಿಂದ ಪ್ರತ್ಯುತ್ತರ

ಪಾಕ್ ಸೇನೆಯಿಂದ ಮುಂದುವರಿದ ಅಪ್ರಚೋದಿತ ಗುಂಡಿನ ದಾಳಿ, ಭಾರತೀಯ ಸೇನೆಯಿಂದ ಪ್ರತ್ಯುತ್ತರ

ಅರುಣ್​ ಕುಮಾರ್​ ಬೆಳ್ಳಿ
|

Updated on: May 08, 2025 | 10:35 AM

ಪಾಕಿಸ್ತಾನ ಸೇನೆಯ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವು-ನೋವುಗಳು ಸಂಭವಿಸಿಲ್ಲ. ಜನರ ರಕ್ಷಣೆಗೆ ಭಾರತದ ಸೇನೆ, ಸಿಅರ್​ಪಿಎಫ್, ಬಿಎಸ್​ಎಫ್ ಮತ್ತು ಕಾಶ್ಮೀರದ ಪೊಲೀಸ್ ಸನ್ನದ್ಧ ಸ್ಥಿತಿಯಲ್ಲಿವೆ. ಆದರೆ, ಕೈಲಾಗದವನು ಮೈ ಪರಚಿಕೊಂಡಂತೆ ಪಾಕ್ ಸೇನೆಯು ನಾಗರಿಕರ ತಾಣಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿರುವುದು ಅದರ ಹೇಡಿತನಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಬೆಂಗಳೂರು, ಮೇ 8: ಸುಟ್ಟರೂ ಹುಟ್ಟುಗುಣ ಹೋಗದು, ನಾಯಿ ಬಾಲ ಏನು ಮಾಡಿದರೂ ಡೊಂಕು-ನಾಣ್ಣುಡಿಗಳು ಪಾಕಿಸ್ತಾನ ಮತ್ತು ಅದರ ಸೇನೆಗೆ ಸೂಟ್ ಆದಂತೆ ಬೇರೆ ಯಾರಿಗೂ ಅನ್ವಯಿಸುವುದಿಲ್ಲ. ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪಾಕ್ ಸೇನೆ ಜಮ್ಮು ಮತ್ತು ಕಾಶ್ಮೀರದ ಗಡಿಯುದ್ದಕ್ಕೂ ನಾಗರಿಕರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ (unprovoked firing) ನಡೆಸುತ್ತಿದೆ. ಪೂಂಚ್, ಕುಪ್ವಾರಾ, ಬಾರಾಮುಲ್ಲಾ, ಅಖ್ನೂರ್ ಮತ್ತು ಕರ್ನಾಹ್ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆದಿದೆ. ಪಾಕ್ ದಾಳಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ, ಆ ವಿಚಾರ ಬೇರೆ. ಆದರೆ, ನಿನ್ನೆ ಉಗ್ರರ ಕ್ಯಾಂಪ್​ಗಳನ್ನು ಭಾರತದ ವಾಯುಸೇನೆ ಧ್ವಂಸಗೊಳಿಸಿದ್ದು ನೆರೆರಾಷ್ಟ್ರಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ.

ಇದನ್ನೂ ಓದಿ: ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ; ಪಾಕ್ ವಿರುದ್ಧ ಮತ್ತೆ ಆಕ್ರೋಶ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ