ನಿವಾಸಿಗಳನ್ನು ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ

Updated on: May 08, 2025 | 6:10 PM

ಆಪರೇಷನ್ ಸಿಂದೂರ ಎರಡನೇ ದಿನವೂ ಮುಂದುವರೆದಿದೆ. ಲಾಹೋರ್, ರಾವಲ್ಡಿಂಡಿ ಸೇರಿದಂತೆ ಪಾಕ್​ನ ವಿವಿರಧ ನಗರಗಳಲ್ಲಿ ಭಾರತ ಡ್ರೋನ್ ದಾಳಿ ನಡೆಸಿದ್ದು, ಇದಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಇದಕ್ಕೆ ಪೂರಕವೆಂಬಂತೆ ಸಂಸದ ತಾಹಿರ್ ಇಕ್ಬಾಲ್‌ ಎನ್ನುವರು ಪಾಕಿಸ್ತಾನ ಸಂಸತ್​ನಲ್ಲಿ ಗೋಳೋ ಅಂತ ಅತ್ತಿದ್ದಾರೆ.

ಕರಾಚಿ, (ಮೇ 08): ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಮಂಗಳವಾರ ತಡರಾತ್ರಿ ಪಾಕಿಸ್ತಾನದ ಭಯೋತ್ಪಾದಕ ನೆಲಗಳ ಮೇಲೆ ದಾಳಿ ಮಾಡಿದೆ. ಒಟ್ಟು ಒಂಭತ್ತು ಕಡೆಗಳಲ್ಲಿ ದಾಳಿ ಮಾಡಿದ್ದು ಉಗ್ರರ ಅಡುಗು ತಾಣಗಳನ್ನು ಧ್ವಂಸ ಮಾಡಿದ್ದು, ಇದೀಗ ಆಪರೇಷನ್ ಸಿಂದೂರ ಎರಡನೇ ದಿನವೂ ಮುಂದುವರೆದಿದೆ. ಲಾಹೋರ್, ರಾವಲ್ಡಿಂಡಿ ಸೇರಿದಂತೆ ಪಾಕ್​ನ ವಿವಿರಧ ನಗರಗಳಲ್ಲಿ ಭಾರತ ಡ್ರೋನ್ ದಾಳಿ ನಡೆಸಿದ್ದು, ಇದಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಇದಕ್ಕೆ ಪೂರಕವೆಂಬಂತೆ ಸಂಸದ ತಾಹಿರ್ ಇಕ್ಬಾಲ್‌ ಎನ್ನುವರು ಪಾಕಿಸ್ತಾನ ಸಂಸತ್​ನಲ್ಲಿ ಗೋಳೋ ಅಂತ ಅತ್ತಿದ್ದಾರೆ. ಪಾಕಿಸ್ತಾನದ ಸಂಸದ ಹಾಗೂ ಪಾಕಿಸ್ತಾನ ಸೇನೆಯ ನಿವೃತ್ತ ಮೇಜರ್ ಆಗಿರುವ ತಾಹಿರ್ ಇಕ್ಬಾಲ್‌, ಇಂದು (ಮೇ 08) ಪಾಕ್ ಸಂಸತ್​ನಲ್ಲಿ ಭಾರತದ ದಾಳಿ ಬಗ್ಗೆ ಮಾತನಾಡಿದ್ದು, ಈ ವಳೇ ಪಾಕಿಸ್ತಾನದ ನಿವಾಸಿಗಳನ್ನು ರಕ್ಷಿಸುವಂತೆ ಕಣ್ಣೀರಿಟ್ಟಿದ್ದಾರೆ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More