AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳನ್ನು ಯಾವ ಕಾರಣಕ್ಕೂ ಅವಿದ್ಯಾವಂತರಾಗಿ ಉಳಿಯಲು ಬಿಡಬಾರದು, ಓದು ಸ್ವಾಭಿಮಾನ ಬೆಳೆಸುತ್ತದೆ: ಸಿದ್ದರಾಮಯ್ಯ, ಸಿಎಂ

ಮಕ್ಕಳನ್ನು ಯಾವ ಕಾರಣಕ್ಕೂ ಅವಿದ್ಯಾವಂತರಾಗಿ ಉಳಿಯಲು ಬಿಡಬಾರದು, ಓದು ಸ್ವಾಭಿಮಾನ ಬೆಳೆಸುತ್ತದೆ: ಸಿದ್ದರಾಮಯ್ಯ, ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 09, 2024 | 5:22 PM

ಅವಕಾಶಗಳು ಸಿಕ್ಕಾಗ ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು, ತನಗೆ ಅವಕಾಶ ಸಿಕ್ಕ ಕಾರಣ ಓದಿ ವಿದ್ಯಾವಂತನಾದೆ, ಆದರೆ ತನ್ನ ಸಹೋದರರು ಓದದ ಕಾರಣ ಉಳುಮೆ ಮಾಡುತ್ತಾರೆ ಎಂದು ಅವರು ಹೇಳಿದರು. ವೇದಿಕೆ ಮೇಲೆ ಆಸೀನರಾಗಿದ್ದ ಸ್ವಾಮೀಜಿಯವರು ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವುದನ್ನು ಶ್ಲಾಘಿಸಿದ ಸಿದ್ದರಾಮಯ್ಯ ವಿದ್ಯೆಯು ಸ್ವಾಭಿಮಾನದ ಬದುಕು ನಡೆಸಲು ನೆರವಾಗುತ್ತದೆ ಎಂದು ಹೇಳಿದರು.

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಬೃಹತ್ ಉಪ್ಪಾರ ಸಮಾವೇಶದಲ್ಲಿ (Uppar community convention) ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಅವಿದ್ಯಾವಂತರಾಗಿ ಉಳಿಯಲು ಬಿಡಬೇಡಿ ಎಂದು ಪೋಷಕರಿಗೆ (parents) ಮನವಿ ಮಾಡಿದರು. ತಮ್ಮ ಬದುಕಿನ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ತಮಗೆ ಓದುವ, ಶಿಕ್ಷಣ ಸಂಪಾದಿಸುವ ಉತ್ಕಟ ಅಸೆಯಿತ್ತು, ತಮ್ಮಲ್ಲಿದ್ದ ಛಲದಿಂದಲೇ ಕಾನೂನು ಪದವಿ ಪಡೆಯುವುದು ಸಾಧ್ಯವಾಯಿತು ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ನೆರವಿನಿಂದ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು ಎಂದು ಹೇಳಿದರು. ಅವಕಾಶಗಳು ಸಿಕ್ಕಾಗ ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು, ತನಗೆ ಅವಕಾಶ ಸಿಕ್ಕ ಕಾರಣ ಓದಿ ವಿದ್ಯಾವಂತನಾದೆ, ಆದರೆ ತನ್ನ ಸಹೋದರರು ಓದದ ಕಾರಣ ಉಳುಮೆ ಮಾಡುತ್ತಾರೆ ಎಂದು ಅವರು ಹೇಳಿದರು. ವೇದಿಕೆ ಮೇಲೆ ಆಸೀನರಾಗಿದ್ದ ಸ್ವಾಮೀಜಿಯವರು ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವುದನ್ನು ಶ್ಲಾಘಿಸಿದ ಸಿದ್ದರಾಮಯ್ಯ ವಿದ್ಯೆಯು ಸ್ವಾಭಿಮಾನದ ಬದುಕು ನಡೆಸಲು ನೆರವಾಗುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ