ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?

Edited By:

Updated on: Jun 15, 2025 | 6:07 PM

ಪ್ರೀತಿಸಿ ವಿವಾಹವಾಗಿದ್ದ ಮಗಳನ್ನು ಪೋಷಕರು ಹೊತ್ತೊಯ್ದಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಹುಬ್ಬಳ್ಳಿಯ ನವನಗರ ಪೊಲೀಸ್​ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥವಾಗಿದ್ದು, ಅಂತಿಮವಾಗಿ ಪೋಷಕರು, ಸುಷ್ಮಾ ತನ್ನ ಪತಿ ನಿರಂಜನ್ ಜೊತೆ ಜೀವನ ನಡೆಸಲು ಒಪ್ಪಿದ್ದಾರೆ. ನಿರಂಜನ, ಸುಷ್ಮಾ 8 ವರ್ಷ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2 ವರ್ಷದ ಹಿಂದೆ ಗದಗದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದ್ರೆ, ಪತಿ ನಿರಂಜನ್​ ನನ್ನು ನೋಡಲು ಸುಷ್ಮಾ ನಿನ್ನೆ ಮನೆಗೆ ಬಂದಿದ್ದಳು. ಆಗ ನಿರಂಜನ್ ಮನಗೆ ನುಗ್ಗಿ ಪೋಷಕರು ಸುಷ್ಮಾಳನ್ನು ಹೊತ್ತೊಯ್ದಿದ್ದರು

ಹುಬ್ಬಳ್ಳಿ, ಜೂನ್ 15): ಪ್ರೀತಿಸಿ ವಿವಾಹವಾಗಿದ್ದ ಮಗಳನ್ನು ಪೋಷಕರು ಹೊತ್ತೊಯ್ದಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಹುಬ್ಬಳ್ಳಿಯ ನವನಗರ ಪೊಲೀಸ್​ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥವಾಗಿದ್ದು, ಅಂತಿಮವಾಗಿ ಪೋಷಕರು, ಸುಷ್ಮಾ ತನ್ನ ಪತಿ ನಿರಂಜನ್ ಜೊತೆ ಜೀವನ ನಡೆಸಲು ಒಪ್ಪಿದ್ದಾರೆ. ನಿರಂಜನ, ಸುಷ್ಮಾ 8 ವರ್ಷ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2 ವರ್ಷದ ಹಿಂದೆ ಗದಗದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದ್ರೆ, ಪತಿ ನಿರಂಜನ್​ ನನ್ನು ನೋಡಲು ಸುಷ್ಮಾ ನಿನ್ನೆ ಮನೆಗೆ ಬಂದಿದ್ದಳು. ಆಗ ನಿರಂಜನ್ ಮನಗೆ ನುಗ್ಗಿ ಪೋಷಕರು ಸುಷ್ಮಾಳನ್ನು ಹೊತ್ತೊಯ್ದಿದ್ದರು. ಸುಷ್ಮಾ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲವೆಂದು ನಿರಂಜನ್​ ಗೆ ಧಮ್ಕಿ ಹಾಕಿದ್ದರು. ಈ ಸಂಬಂಧ ನಿರಂಜನ್ ನವನಗರ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಸುಷ್ಮಾ ಪೋಷಕರನ್ನು ಠಾಣೆಗೆ ಕರೆಯಿಸಿ ವಿಚಾರನೆ ನಡೆಸಿದ್ದಾರೆ. ಈ ವೇಳೆ ಸುಷ್ಮಾ, ನಿರಂಜನ್ ಜೊತೆಗೆ ಹೋಗುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಕೊನೆ ಸುಷ್ಮಾಳ ನಿರ್ಧಾರಕ್ಕೆ ತಂದೆ ಪರಶುರಾಮ್ ಮತ್ತಿತರರು ಸಮ್ಮತಿಸಿದ್ದು, ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ.

Follow Us
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More