AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ

ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ

ರಮೇಶ್ ಬಿ. ಜವಳಗೇರಾ
|

Updated on: Aug 12, 2025 | 9:33 PM

Share

ಶಕ್ತಿ ಯೋಜನೆಯಿಂದಾಗಿ ಸರಿಯಾಗಿ ಸಾರಿಗೆ ಬಸ್​ ಗಳು ಸಂಚರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯ ಇದ್ದ ಕೆಲವು ಸಾರಿಗೆ ಬಸ್​ ಗಳು ಡಕೋಟ ಆಗಿವೆ. ಎಲ್ಲೊಂದರಲ್ಲಿ ಬ್ರೇಕ್ ಫೇಲ್, ಚಕ್ರ ಕಳಚಿ ಬೀಳುವುದು ನಾನಾ ಪ್ರಾಬ್ಲಂಗಳು ಬಸ್​ ಗಳಲ್ಲಿ ಕಂಡುಬರುತ್ತಿವೆ. ಈಗ ಹಾವೇರಿಯಲ್ಲಿ ಬಸ್ ವೊಂದರ ಮೇಲ್ಛಾವಣಿಯೇ ಸೋರುತ್ತಿರುವುದು ವಿಡಿಯೋ ವೈರಲ್ ಆಗಿದೆ.

ಹಾವೇರಿ, (ಆಗಸ್ಟ್ 12): ಶಕ್ತಿ ಯೋಜನೆಯಿಂದಾಗಿ ಸರಿಯಾಗಿ ಸಾರಿಗೆ ಬಸ್​ ಗಳು ಸಂಚರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯ ಇದ್ದ ಕೆಲವು ಸಾರಿಗೆ ಬಸ್​ ಗಳು ಡಕೋಟ ಆಗಿವೆ. ಎಲ್ಲೊಂದರಲ್ಲಿ ಬ್ರೇಕ್ ಫೇಲ್, ಚಕ್ರ ಕಳಚಿ ಬೀಳುವುದು ನಾನಾ ಪ್ರಾಬ್ಲಂಗಳು ಬಸ್​ ಗಳಲ್ಲಿ ಕಂಡುಬರುತ್ತಿವೆ. ಈಗ ಹಾವೇರಿಯಲ್ಲಿ ಬಸ್ ವೊಂದರ ಮೇಲ್ಛಾವಣಿಯೇ ಸೋರುತ್ತಿರುವುದು ವಿಡಿಯೋ ವೈರಲ್ ಆಗಿದೆ. KA 25, F 2909 ನಂಬರಿನ ಹಾವೇರಿಯಿಂದ ಮೇಲ್ಮರಿಗೆ ತೆರಳುತ್ತಿದ್ದ ಬಸ್ ಮೇಲ್ಛಾವಣಿ ಸೋರಿಕೆಯಾಗಿದ್ದು, ಮಳೆ ನೀರಿನಿಂದ ಬಚಾವ್ ಆಗಲು ಪ್ರಯಾಣಿಕರು ಬಸ್​ ನಲ್ಲೇ ಛತ್ರಿ ಹಿಡಿದುಕೊಂಡು ಕುಳಿತುಕೊಂಡಿದ್ದಾರೆ. ಛತ್ರಿ ಇಲ್ಲದವರು ಮಳೆ ನೀರು ಸಿಡಿಸಿಕೊಳ್ಳುತ್ತ ಬಸ್​ ನ ದುಸ್ಥಿತಿಗೆ ಹಿಡಿಶಾಪ ಹಾಕುತ್ತ ಪ್ರಯಾಣಿಸಿದ್ದಾರೆ.