ಸಿದ್ದರಾಮಯ್ಯರನ್ನು ಯಾರೇನೂ ಮಾಡಕ್ಕಾಗಲ್ಲ, ಕರ್ನಾಟಕದ ಜನತೆ ಅವರೊಂದಿಗಿದೆ: ಬೈರತಿ ಸುರೇಶ್, ಸಚಿವ
ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವ ಸಂಪುಟ ಮತ್ತು ಶಾಸಕರಿಗೆ ಸಿದ್ದರಾಮಯ್ಯ ಬಗ್ಗೆ ಯಾವುದೇ ದೂರಿಲ್ಲ, ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ನಮ್ಮದು ಹೈಕಮಾಂಡ್ ಹೇಳಿದಂತೆ ನಡೆಯುವ ಪಕ್ಷ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ, ನಾಯಕರ ನಡುವೆ ಯಾವ ಕಿತ್ತಾಟವೂ ಇಲ್ಲ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ವಿಜಯಪುರ, ಮೇ 15: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಹೊಗಳುವುದರಲ್ಲಿ ದಣಿಯಲ್ಲ! ಇವತ್ತು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಸಿದ್ದರಾಮಯ್ಯ ದೇಶ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು, ಅವರ ರಾಜಕೀಯ ಬದುಕಿನಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ, ಬಿಜೆಪಿ ನಾಯಕರು ಅವರ ಹೆಸರಿಗೆ ಕಳಂಕ ಮೆತ್ತುವ ಪ್ರಯತ್ನ ಮಾಡಿದರು, ಅದರೆ ಸಫಲರಾಗಲಿಲ್ಲ ಎಂದು ಹೇಳಿದರು. ಅವರನ್ನು ಯಾರೇನೂ ಮಾಡಲಾಗಲ್ಲ; ರಾಜ್ಯದ ಬಡವರು, ಶೋಷಿತರು ಎಲ್ಲ ಸಮುದಾಯಗಳಲ್ಲಿರುವ ಬಡವರ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಿಜವಾದ ಕಾಳಜಿ ಇದೆ ಎಂದು ಸುರೇಶ್ ಹೇಳಿದರು.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಭಾಗಿ ಆರೋಪ: ಸಚಿವ ಬೈರತಿ ಸುರೇಶ್ ಹೇಳಿದ್ದೇನು?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ