AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಮನ್ ಕೀ ಬಾತ್​ನಲ್ಲಿ ಸದ್ದು ಮಾಡಿದ  ಕಲಬುರಗಿಯ ಖಡಕ್ ರೊಟ್ಟಿ

ಪ್ರಧಾನಿ ಮೋದಿ ಮನ್ ಕೀ ಬಾತ್​ನಲ್ಲಿ ಸದ್ದು ಮಾಡಿದ ಕಲಬುರಗಿಯ ಖಡಕ್ ರೊಟ್ಟಿ

ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Jun 29, 2025 | 5:43 PM

Share

ಪ್ರತಿ ತಿಂಗಳ ಕೊನೆ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್​​ ಕಿ ಬಾತ್’ ನಲ್ಲಿ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಯಾರೇ ಒಂದು ವಿಶಿಷ್ಟ ಸಾಧನೆ ಮಾಡಿದರೂ ಸಹ ಮೋದಿ ಮನ್​ ಕಿ ಬಾತ್​ ನಲ್ಲಿ ಮೆಲುಕಿ ಹಾಕಿ ಅಭಿನಂದನೆ ತಿಳಿಸುತ್ತಾರೆ. ಅದರಂತೆ ಇಂದಿನ ಮನ್​​ ಕಿ ಬಾಂತ್​ ನಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಸದ್ದು ಮಾಡಿದೆ. ಹೌದು...ಇಂದು (ಜೂನ್ 29) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್​ ​ಕಿ ಬಾತ್​ ನ ​ 123ನೇ ಸಂಚಿಕೆಯಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಬಗ್ಗೆ ಗುಣಗಾನ ಮಾಡಿದ್ದಾರೆ.

ಕಲಬುರಗಿ, (ಜೂಣ್ 29): ಪ್ರತಿ ತಿಂಗಳ ಕೊನೆ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್​​ ಕಿ ಬಾತ್’ ನಲ್ಲಿ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಯಾರೇ ಒಂದು ವಿಶಿಷ್ಟ ಸಾಧನೆ ಮಾಡಿದರೂ ಸಹ ಮೋದಿ ಮನ್​ ಕಿ ಬಾತ್​ ನಲ್ಲಿ ಮೆಲುಕಿ ಹಾಕಿ ಅಭಿನಂದನೆ ತಿಳಿಸುತ್ತಾರೆ. ಅದರಂತೆ ಇಂದಿನ ಮನ್​​ ಕಿ ಬಾಂತ್​ ನಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಸದ್ದು ಮಾಡಿದೆ. ಹೌದು…ಇಂದು (ಜೂನ್ 29) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್​ ​ಕಿ ಬಾತ್​ ನ ​ 123ನೇ ಸಂಚಿಕೆಯಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಬಗ್ಗೆ ಗುಣಗಾನ ಮಾಡಿದ್ದಾರೆ.

ಕಲಬುರಗಿ ಜಿಲ್ಲಾಡಳಿತವು ಸ್ವಸಾಯ ಮಹಿಳಾ ಸಂಘದ ಮೂಲಕ ರೊಟ್ಟಿ ಬ್ರ್ಯಾಂಡ್ ಮಾಡಿದ್ದು, ಇದೀಗ ಈ ಕಲಬುರಗಿ ರೊಟ್ಟಿ ರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಆಗಿದೆ. ಸದ್ಯ ಆನ್ ಲೈನ್ ನಲ್ಲೂ ಕಲಬುರಗಿ ರೊಟ್ಟಿಗೆ ಸಖತ್ ಬೇಡಿಕೆ ಇದೆ. ಜಿಲ್ಲಾಡಳಿತದಿಂದ 100 ರೊಟ್ಟಿ‌ ಮಾಡೋ‌ ಯಂತ್ರ ವಿತರಣೆ ಮಾಡಲಾಗಿತ್ತು. ಮಹಿಳಾ ಸ್ವಸಾಯ ಗುಂಪುಗಳಿಗೆ ನೀಡಿ ರೊಟ್ಟಿ ತಯಾರು ಮಾಡಿಸಲಾಗಿದೆ. ಆ ಮೂಲಕ ಸಾವಿರಾರು ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಿತ್ತು. ಆ ರೊಟ್ಟಿಗೆ ಜಿಲ್ಲಾಡಳಿತ ಬ್ರ್ಯಾಂಡ್ ಮಾಡಿ ಮಾರುಕಟ್ಟೆ ಒದಗಿಸಿತ್ತು. ಇದೀಗ ಇದನ್ನೇ ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್​ ನಲ್ಲಿ ಕೊಂಡಾಡಿದಿದ್ದಾರೆ.

Follow Us
Dattatraya Patil
Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More