AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

My India My Life Goals: ಚಂಡೀಗಢ್ ಪೊಲೀಸ್ ಕಾನ್​ಸ್ಟೇಬಲ್ ದೇವೆಂದರ್ ಸುರಾ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿMy India My Life Goals: ಚಂಡೀಗಢ್ ಪೊಲೀಸ್ ಕಾನ್​ಸ್ಟೇಬಲ್ ದೇವೆಂದರ್ ಸುರಾ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿ

My India My Life Goals: ಚಂಡೀಗಢ್ ಪೊಲೀಸ್ ಕಾನ್​ಸ್ಟೇಬಲ್ ದೇವೆಂದರ್ ಸುರಾ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on:Jun 22, 2023 | 2:39 PM

Share

ಇಂಥ ಸದ್ಬುದ್ಧಿಯ ಜನರಿಂದಾಗೇ ಉಸಿರಾಡಲು ಆಮ್ಲಜನಕ ಲಭ್ಯವಾಗುತ್ತಿದೆ, ಕಣ್ಣಿಗೆ ತಂಪನ್ನೀಯುವ ಹಸಿರು ಗಿಡಮರಗಳು ನೋಡಸಿಗುತ್ತಿವೆ ಅಂದರೆ ಉತ್ಪ್ರೇಕ್ಷೆ ಅನಿಸದು.

ಬೆಂಗಳೂರು: ಹಸಿರು ಯೋಧ (green warrior), ಹಸಿರು ಕ್ರಾಂತಿಕಾರ, ಪರಿಸರ ರಕ್ಷಕ, ಪರಿಸರವಾದಿ (environmentalist) ಮೊದಲಾದ ಎಲ್ಲ ವಿಶೇಷಣಗಳನ್ನು ಬಳಸಿದಾಗ್ಯೂ ಚಂಡೀಗಢ್ ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ದೇವೆಂದರ್ ಸುರಾ (Devender Sura) ಆವರ ಪರಿಸರ ಪ್ರೇಮವನ್ನು ವ್ಯಾಖ್ಯಾನಿಸಲಾಗದು. ಇಂಥ ಸದ್ಬುದ್ಧಿಯ ಜನರಿಂದಾಗೇ ನಮಗೆ ಉಸಿರಾಡಲು ಆಮ್ಲಜನಕ ಲಭ್ಯವಾಗುತ್ತಿದೆ, ಕಣ್ಣಿಗೆ ತಂಪನ್ನೀಯುವ ಹಸಿರು ಗಿಡಮರಗಳು ನೋಡಸಿಗುತ್ತಿವೆ ಅಂದರೆ ಉತ್ಪ್ರೇಕ್ಷೆ ಅನಿಸದು. ಸರ್ಕಾರೀ ಕೆಲಸ ಸಿಕ್ಕ ಕೂಡಲೇ ಕೂಡಲೇ ಹೆತ್ತ ತಾಯಿ ತಂದೆಯನ್ನೂ ಮರೆಯುವ ಜನ ನಮ್ಮ ನಡುವೆ ಇದ್ದಾರೆ. ಆದರೆ ದೇವೆಂದರ್ ಇಡೀ ಮನುಕುಲದ ತಾಯಿಯೆನಿಸಿಕೊಳ್ಳುವ ಭೂಮಿಯ ಸಂರಕ್ಷಣೆ ಮತ್ತು ಅದರ ಅರೋಗ್ಯಕ್ಕಾಗಿ ಯಾರೂ ನಿರೀಕ್ಷಿಸದನ್ನು ಮಾಡುತ್ತಿದ್ದಾರೆ. ಅವರ ಗುರಿ, ಸಂಕಲ್ಪ, ಬದ್ಧತೆ, ಕಾಳಜಿಗಳಿಗೆ ಕನ್ನಡಿಗರದೊಂದು ಸಲಾಂ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Jun 07, 2023 04:32 PM

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.