R Ashoka; ಲೋಕ ಸಭಾ ಚುನಾವಣೆ ನಂತರ ರಾಜ್ಯ ರಾಜಕೀಯ ಚಿತ್ರಣ ಬದಲಾಗಲಿದೆ: ಆರ್ ಅಶೋಕ, ಶಾಸಕ

Updated on: Jun 19, 2023 | 6:48 PM

ಎಲ್ಲಿಯವರೆಗೆ ಫ್ರೀ ಸ್ಕೀಮ್ ಗಳು ಜಾರಿಯಲ್ಲಿರುತ್ತವೋ ಅಲ್ಲಿವರೆಗೆ ಜನ ಎಂಜಾಯ್ ಮಾಡಲಿ ಅಂತ ಅಶೋಕ ಕುಹುಕವಾಡಿದರು

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಒಂದೊಂದಾಗಿ ಗ್ಯಾರಂಟಿಗಳನ್ನು ಈಡೇರಿಸಲು ಪ್ರಾರಂಭಿಸುತ್ತಿದ್ದಂತೆಯೇ ಬಿಜೆಪಿ ನಾಯಕರು ಅಧೀರರಾಗುತ್ತಿದ್ದಾರೆ ಅಂತ ಭಾಸವಾಗುತ್ತಿದೆ. ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಆರ್ ಅಶೋಕ (R Ashoka) ಶಕ್ತಿ ಯೋಜನೆಯನ್ನು (Shakti Scheme) ಗೇಲಿ ಮಾಡುವುದು ನಿಲ್ಲಿಸಲಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಖಾಸಗಿ ಬಸ್, ಆಟೋ, ಕ್ಯಾಬ್ ಗಳಿಗೆ ಭಯಂಕರ ನಷ್ಟವಾಗುತ್ತಿದೆ, ಅವುಗಳಲ್ಲೂ ಉಚಿತ ಪ್ರಯಾಣ ಅಂತ ಘೋಷಿಸಿದರೆ ಅವರು ಬದುಕಿಕೊಳ್ಳುತ್ತಾರೆ ಎಂದು ಹೇಳಿದರು. ಯೋಜನೆ ಜಾರಿಗೊಳ್ಳುವ ಮೊದಲು ಇವರಿಂದ ಸಾಧ್ಯವಾಗದು, ಜನಕ್ಕೆ ಮೋಸ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದವರು ಅದು ಜಾರಿಯಾದ ಬಳಿಕ ಮತ್ತೊಂದು ಬಗೆಯ ವರಾತ. ಉಚಿತ ಡ್ರಾಮ ಬಹಳ ದಿನ ನಡೆಯದು, ಲೋಕ ಸಭಾ ಚುನಾವಣೆಯ (Lok Sabha Polls) ನಂತರ ರಾಜ್ಯದಲ್ಲಿ ಏನೇನಾಗಲಿದೆಯೋ? ಹಾಗಾಗಿ, ಎಲ್ಲಿಯವರೆಗೆ ಫ್ರೀ ಸ್ಕೀಮ್ ಗಳು ಜಾರಿಯಲ್ಲಿರುತ್ತವೋ ಅಲ್ಲಿವರೆಗೆ ಜನ ಎಂಜಾಯ್ ಮಾಡಲಿ ಅಂತ ಅಶೋಕ ಕುಹುಕವಾಡಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More