‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಇರುವ ಎಲ್ಲ ಸ್ಪರ್ಧಿಗಳಿಗೂ ಒಂದೊಂದು ಇಂಟರೆಸ್ಟಿಂಗ್​ ಆದಂತಹ ಕಥೆ ಇದೆ. ಅಂಥ ಕಥೆಯನ್ನು ಇಟ್ಟುಕೊಂಡು ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’ ಸಿನಿಮಾಗೆ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ತುಕಾಲಿ ಸಂತೋಷ್​ ಹೀರೋ ಆಗಿದ್ದು, ಅವರಿಗೆ ಸಿರಿ ಮತ್ತು ಭಾಗ್ಯಶ್ರೀ ಹೀರೋಯಿನ್​ ಆಗಿದ್ದಾರೆ.

‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​
|

Updated on: Nov 05, 2023 | 11:47 AM

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಶೋ (Bigg Boss Kannada) ನಡೆಸಿಕೊಡುವ ರೀತಿ ಎಂದರೆ ಅಭಿಮಾನಿಗಳಿಗೆ ಸಖತ್​ ಇಷ್ಟ. ಸ್ಪರ್ಧಿಗಳು ತಪ್ಪು ಮಾಡಿದಾಗ ಅವರು ಖಡಕ್​ ಆಗಿ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಇನ್ನುಳಿದ ಸಂದರ್ಭದಲ್ಲಿ ಎಲ್ಲರನ್ನೂ ನಗಿಸುತ್ತಾ ಭರ್ಜರಿ ಮನರಂಜನೆ ನೀಡುತ್ತಾರೆ. ಈ ಶನಿವಾರದ ಎಪಿಸೋಡ್​ ಸಖತ್​ ಖಡಕ್​ ಆಗಿತ್ತು. ಆದರೆ ಭಾನುವಾರದ ಸಂಚಿಕೆಯಲ್ಲಿ ಹೆಚ್ಚು ಫನ್​ ಇರಲಿದೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಪ್ರೋಮೋ ಬಿಡುಗಡೆ ಮಾಡಲಾಗಿದೆ. ‘ಎಲ್ಲ ಸ್ಪರ್ಧಿಗಳಲ್ಲೂ ಒಂದೊಂದು ಇಂಟರೆಸ್ಟಿಂಗ್​ ಕಥೆ ಇದೆ. ಅದನ್ನು ಮೂವೀ ಮಾಡಿದರೆ ವರ್ಕ್​ ಆಗತ್ತೆ’ ಎಂದು ಹೇಳುವ ಮೂಲಕ ಸುದೀಪ್​ (Kichcha Sudeep) ಅವರು ಕೆಲವು ಪೋಸ್ಟರ್​ಗಳನ್ನು ತೋರಿಸಿದ್ದಾರೆ. ‘ಪಾಪ್ರೆಡ್ಡಿ ಪಾಳ್ಯ’, ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’, ‘ಬೆಂಕಿಯ ಬಲೆ’ ಇತ್ಯಾದಿ ಸಿನಿಮಾಗಳ ಪೋಸ್ಟರ್​ ತೋರಿಸಲಾಗಿದೆ. ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’ ಸಿನಿಮಾಗೆ ತುಕಾಲಿ ಸಂತೋಷ್​ (Tukali Santhosh) ಹೀರೋ ಆಗಿದ್ದು, ಅವರಿಗೆ ಭಾಗ್ಯಶ್ರೀ ಮತ್ತು ಸಿರಿ ಹೀರೋಯಿನ್​ ಆಗಿರುವ ರೀತಿಯಲ್ಲಿ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಈ ಸಂಚಿಕೆ ನವೆಂಬರ್​ 5ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆ ಉಚಿತವಾಗಿ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us