ಧಮ್​​ ಇದ್ರೆ ಜಮೀರ್​ಗೆ ಬಿಳಿ ಟೋಪಿ ಸಾಬಣ್ಣ ಎಂದು ಹೇಳಿ: ಡಿಕೆಶಿಗೆ ಪ್ರತಾಪ್​ ಸಿಂಹ ಸವಾಲು

Updated By: ಪ್ರಸನ್ನ ಹೆಗಡೆ

Updated on: Oct 13, 2025 | 1:16 PM

ಬಿಜೆಪಿ ಶಾಸಕ ಮುನಿರತ್ನಗೆ ಕರಿಟೋಪಿ MLA ಎಂದು ಕರೆದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್​ ಗೆ ಮಾಜಿ ಸಂಸದ ಪ್ರತಾಪ್​ ಸಿಂಹ ಚಾಲೆಂಜ್​ ಹಾಕಿದ್ದಾರೆ. ನಿಮಗೆ ಧಮ್​ ಇದ್ದರೆ ಧಮ್​​ ಇದ್ದರೆ ಶಾಸಕ ಜಮೀರ್​ಗೆ ಬಿಳಿ ಟೋಪಿ ಸಾಬಣ್ಣ ಎಂದು ಕರೆಯಿರಿ ಎಂದಿದ್ದಾರೆ. ಅಲ್ಲದೆ ಕುಸುಮಾರನ್ನು ಬೇಕಾದ್ರೆ MLC ಮಾಡಿಸಿ, ರಾಜ್ಯಸಭೆ ಸ್ಥಾನ ಕೊಡಿಸಿ. ಇದನ್ನು ಬಿಟ್ಟು ಸ್ಥಳೀಯ ಶಾಸಕರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಮೈಸೂರು, ಅಕ್ಟೋಬರ್​ 13: ಬಿಜೆಪಿ ಶಾಸಕ ಮುನಿರತ್ನಗೆ ಕರಿಟೋಪಿ MLA ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಕರೆದ ವಿಚಾರವಾಗಿ ಮಾಜಿ ಸಂಸದ ಪ್ರತಾಪ್​ ಸಿಂಹ (Pratap Simha) ಮೈಸೂರಿನಲ್ಲಿ ಕಿಡಿ ಕಾರಿದ್ದಾರೆ. ಡಿಸಿಎಂ‌ಗೆ ಸವಾಲ್​ ಹಾಕಿರೋ ಪ್ರತಾಪ್ ಸಿಂಹ, ಧಮ್​​ ಇದ್ದರೆ ಶಾಸಕ ಜಮೀರ್​ ಗೆ ಬಿಳಿ ಟೋಪಿ ಸಾಬಣ್ಣ ಎಂದು ಕರೆಯಿರಿ ಎಂದಿದ್ದಾರೆ. ಅಲ್ಲದೆ ಕುಸುಮಾರನ್ನು ಬೇಕಾದ್ರೆ MLC ಮಾಡಿಸಿ, ರಾಜ್ಯಸಭೆ ಸ್ಥಾನ ಕೊಡಿಸಿ. ಇದನ್ನು ಬಿಟ್ಟು ಸ್ಥಳೀಯ ಶಾಸಕರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಾ? 2028ಕ್ಕೆ ಡಿ.ಕೆ.ಶಿವಕುಮಾರ್ ಕೂಡ ಜಾಬ್ ಲೆಸ್​ ಆಗುತ್ತಾರೆ. ಆಗ ಡಿ.ಕೆ.ಶಿವಮಾರ್​ ರನ್ನು ಇದೇ ರೀತಿ ನಡೆಸಿಕೊಂಡರೆ ಹೇಗಿರುತ್ತೆ? ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.