Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

ಮಂಜುನಾಥ ಸಿ.
|

Updated on: May 26, 2024 | 9:59 AM

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ಇತ್ತೀಚೆಗೆ ಚರ್ಚೆಗೆ ಕಾರಣವಾಗುತ್ತಿದೆ. ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ, ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎನ್ನಲಾಗುತ್ತಿದೆ. ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತನಾಡಿದ್ದಾರೆ.

ರೆಡ್ ರಾಕ್ ಸ್ಟುಡಿಯೋ ಉದ್ಘಾಟನೆಗೆ ಆಗಮಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra), ಕನ್ನಡ ಚಿತ್ರರಂಗ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ‘ನಮ್ಮ ಹತ್ರ ಸಾಕಷ್ಟು ಕತೆ ಇವೆ, ಐಡಿಯಾ ಇವೆ ಆದರೆ ಅದನ್ನೆಲ್ಲ ಚೆನ್ನಾಗಿ ತೆರೆಗೆ ತರಲು ಬೇಕಾದ ಬಜೆಟ್ ಕೊರತೆ ಕೆಲವು ನಿರ್ದೇಶಕರನ್ನು ಕಾಡುತ್ತಿವೆ. ಕೆಲವು ಹಿರಿಯ ನಿರ್ದೇಶಕರಿಗೆ ಬಜೆಟ್ ಇರುತ್ತದೆ. ಆದರೆ ಅವರು ಕತೆಯ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ. ದೊಡ್ಡ ಸ್ಟಾರ್ ಒಬ್ಬರನ್ನು ತೆಗೆದುಕೊಂಡು, ಮೇಕಿಂಗ್ ಬಗ್ಗೆ ಮಾತ್ರವೇ ಗಮನ ಹರಿಸುತ್ತಾರೆ. ಆದರೆ ಕಂಟೆಂಟ್ ಇರುವವರಿಗೆ ಬಜೆಟ್ ಇರುವುದಿಲ್ಲ, ರಿಸೋರ್ಸ್ ಇರುವುದಿಲ್ಲ. ಇದು ನಮ್ಮ ಮುಖ್ಯ ಸಮಸ್ಯೆ ಆಗುತ್ತಿದೆ. ನಿರ್ಮಾಪಕರು ಕಂಟೆಂಟ್ ಇರುವವರನ್ನು ಹುಡುಕಿ ಪ್ರೋತ್ಸಾಹಿಸಿ ಬೆಂಬಲಿಸಬೇಕು’ ಎಂಬ ಅಭಿಪ್ರಾಯವನ್ನು ಪ್ರಿಯಾಂಕಾ ಉಪೇಂದ್ರ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ