ಇಂದು (ಅಕ್ಟೋಬರ್ 29) ಕನ್ನಡ ಚಿತ್ರಪ್ರೇಮಿಗಳ ಪಾಲಿಗೆ ಕರಾಳ ದಿನ. ಪುನೀತ್ ರಾಜ್ಕುಮಾರ್ (Puneeth Rajkumar) ಇಹಲೋಕ ತ್ಯಜಿಸಿ ಇಂದಿಗೆ ಎರಡು ವರ್ಷ. ಎರಡು ವರ್ಷಗಳಾದರೂ ಅಭಿಮಾನಿಗಳ ನೋವು, ಕಂಬನಿಗಳು ಆರಿಲ್ಲ. ಅಪ್ಪುವನ್ನು ನೆನೆಯದ ದಿನವಿಲ್ಲ. ಇಂದು ಅಪ್ಪು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯ ದಿನದಂದು ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿ ಸ್ಳವನ್ನು ಹೂಗಳಿಂದ ಸಿಂಗರಿಸಲಾಗಿದೆ. ನಿನ್ನೆಯೇ ಹಲವು ಅಲಂಕಾರಿಕ ಕಾರ್ಯಗಳು, ಆಗಮಿಸುವವರ ಅನುಕೂಲಕ್ಕೆ ವ್ಯವಸ್ಥೆಗಳು ಎಲ್ಲವೂ ನಡೆದಿವೆ. ಅಣ್ಣಾವ್ರ ಸಮಾಧಿ ಸ್ಥಳವನ್ನೂ ಹೂಗಳಿಂದ ಅಲಂಕರಿಸಲಾಗಿದೆ. ಇಡೀ ರಸ್ತೆಯನ್ನು ದೀಪಗಳಿಂದ ಸಿಂಗರಿಸಲಾಗಿದೆ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ