‘ಗಂಧದ ಗುಡಿ ಬಗ್ಗೆ ನೀವು ಟ್ವೀಟ್ ಮಾಡಬೇಕು’; ಪುನೀತ್ ಹೇಳಿದ ಮಾತು ನೆನಪಿಸಿಕೊಂಡ ಯಶ್

| Updated By: ರಾಜೇಶ್ ದುಗ್ಗುಮನೆ

Updated on: Apr 11, 2022 | 9:32 PM

ಪುನೀತ್ ನಿಧನದ ವಿಚಾರ ಕೇಳಿ ಯಶ್ ಹಲವು ದಿನ ವಿಚಲಿತಗೊಂಡಿದ್ದರು. ಈಗ ಯಶ್ ಅವರು ಪುನೀತ್ ದೊಡ್ಡ ಗುಣದ ಬಗ್ಗೆ ಮಾತನಾಡಿದ್ದಾರೆ.

ಪುನೀತ್ ರಾಜ್​ಕುಮಾರ್ ಅವರು (Puneeth Rajkumar) ನಿಧನ ಹೊಂದಿ ಆರು ತಿಂಗಳು ಆಗುತ್ತಾ ಬಂದಿದೆ. ಅವರಿಲ್ಲ ಎನ್ನುವ ದುಃಖ ಯಶ್​ಗೆ ತುಂಬಾನೇ ಕಾಡುತ್ತಿದೆ. ಪುನೀತ್ (Puneeth) ನಿಧನಕ್ಕೂ ಕೆಲ ದಿನ ಮೊದಲು ಒಂದೇ ವೇದಿಕೆ ಮೇಲೆ ಅವರು ಯಶ್ ಜತೆ ಸ್ಟೆಪ್ ಹಾಕಿದ್ದರು. ಪುನೀತ್ ನಿಧನದ ವಿಚಾರ ಕೇಳಿ ಯಶ್ ಹಲವು ದಿನ ವಿಚಲಿತಗೊಂಡಿದ್ದರು. ಈಗ ಯಶ್ ಅವರು ಪುನೀತ್ ದೊಡ್ಡ ಗುಣದ ಬಗ್ಗೆ ಮಾತನಾಡಿದ್ದಾರೆ. ‘ಪುನೀತ್ ಅವರು ಮೊದಲಿನಿಂದಲೂ ನನಗೆ ಒಳಿತು ಬಯಸಿದವರು. ‘ರಾಮಾಚಾರಿ’ ಸಿನಿಮಾ ಸಕ್ಸಸ್​ ಆದಾಗಲೂ ಕರೆ ಮಾಡಿ ಮಾತನಾಡಿದ್ದರು. ಒಂದು ದಿನ ಸಿಕ್ಕಾಗ ‘ಗಂಧದ ಗುಡಿ’ (Gandhada Gudi) ಬಗ್ಗೆ ಮಾತನಾಡಿದ್ದೆವು. ಅದು ಡಾಕ್ಯುಮೆಂಟರಿ ಅಲ್ಲವಾ ಎಂದು ಕೇಳಿದಾಗ ಅದು ಸಿನಿಮಾ ಎಂದಿದ್ದರು. ಅಲ್ಲದೆ, ಈ ಸಿನಿಮಾ ಬಗ್ಗೆ ಟ್ವೀಟ್ ಮಾಡಲು ಅವರು ಹೇಳಿದ್ದರು’ ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದಾರೆ ಯಶ್.

ಇದನ್ನೂ ಓದಿ: ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’

‘ಕೆಜಿಎಫ್​ 2’ ಬೇರೆ ವರ್ಷನ್​ಗೆ ಧ್ವನಿ ಕೊಡಲ್ಲ ಅಂದ್ರು ಯಶ್​; ಕಾರಣವೇನು?

Follow us on