AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’

Shahid Kapoor | Jersey: ಶಾಹಿದ್​ ಕಪೂರ್​ ಅಭಿನಯದ ‘ಜೆರ್ಸಿ’ ಸಿನಿಮಾದ ರಿಲೀಸ್​ ದಿನಾಂಕ ಪೋಸ್ಟ್​ ಪೋನ್​ ಆಗಿದೆ. ‘ಕೆಜಿಎಫ್​: ಚಾಪ್ಟರ್​ 2’ ಎದುರು ಸ್ಪರ್ಧೆ ನೀಡಲು ಬಾಲಿವುಡ್​ ಚಿತ್ರ ಹಿಂದೇಟು ಹಾಕಿದೆ.

ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’
ಶಾಹಿದ್​ ಕಪೂರ್​, ಯಶ್​
Follow us
TV9 Web
| Updated By: ಮದನ್​ ಕುಮಾರ್​

Updated on:Apr 11, 2022 | 1:17 PM

ಯಾವುದಾದರೂ ಒಂದು ಹಿಂದಿ ಸಿನಿಮಾ ರಿಲೀಸ್​ ಆಗುವಾಗ ಕನ್ನಡದ ಚಿತ್ರಗಳು ಥಿಯೇಟರ್​ ಬಿಟ್ಟುಕೊಡಬೇಕಾದ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಕನ್ನಡದ ಸಿನಿಮಾಗಳಿಗೆ ಪರಭಾಷೆ ಸಿನಿಮಾಗಳು ಜಾಗ ಬಿಟ್ಟುಕೊಡಬೇಕಾದ ಸಮಯ ಈಗ ಬಂದಿದೆ. ಗುಣಮಟ್ಟ ಮತ್ತು ಕಂಟೆಂಟ್​ ವಿಚಾರದಲ್ಲಿ ಬಾಲಿವುಡ್​ ಸಿನಿಮಾಗಳಿಗೂ ಕೂಡ ಸ್ಯಾಂಡಲ್​ವುಡ್​ ಚಿತ್ರಗಳು ಪೈಪೋಟಿ ನೀಡುತ್ತಿವೆ. ಏ.14ರಂದು ರಿಲೀಸ್​ ಆಗುತ್ತಿರುವ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಇದಕ್ಕೆ ಬೆಸ್ಟ್​ ಉದಾಹರಣೆ. ಯಶ್​ ಅಭಿನಯದ ಈ ಚಿತ್ರ ರಿಲೀಸ್​ ಆಗುತ್ತಿರುವುದಕ್ಕೆ ಅನೇಕ ಪರಭಾಷೆ ಚಿತ್ರಗಳು ಗಪ್​ಚುಪ್​ ಆಗಿವೆ. ‘ಕೆಜಿಎಫ್​ 2’ ಎದುರು ಪೈಪೋಟಿ ನೀಡಬೇಕು ಎಂದುಕೊಂಡಿದ್ದ ಕೆಲವು ನಿರ್ಮಾಪಕರು ಸೈಲೆಂಟ್​ ಆಗಿದ್ದಾರೆ. ಏ.14ರಂದು ಶಾಹಿದ್​ ಕಪೂರ್ (Shahid Kapoor)​ ನಟನೆಯ ‘ಜೆರ್ಸಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಈಗ ಆ ಸಿನಿಮಾದ ರಿಲೀಸ್​ ದಿನಾಂಕ (Jersey Movie Release Date) ಮುಂದೂಡಲಾಗಿದೆ. ‘ಕೆಜಿಎಫ್​: ಚಾಪ್ಟರ್​ 2’ ಎದುರು ಫೈಟ್​ ಮಾಡುವುದು ಕಷ್ಟ ಎಂಬುದನ್ನು ಅರಿತಿರುವ ಈ ಸಿನಿಮಾದ ನಿರ್ಮಾಪಕರು ಒಂದು ವಾರದ ನಂತರ ರಿಲೀಸ್​ ಮಾಡಲು ತೀರ್ಮಾನಿಸಿದ್ದಾರೆ.

‘ಜೆರ್ನಿ’ ಸಿನಿಮಾದಲ್ಲಿ ಶಾಹಿದ್​ ಕಪೂರ್ ಅವರಿಗೆ ಜೋಡಿಯಾಗಿ ಮೃಣಾಲ್​ ಠಾಕೂರ್​ ನಟಿಸಿದ್ದಾರೆ. ಇದು ತೆಲುಗಿನಲ್ಲಿ ನಾನಿ ನಟಿಸಿದ ‘ಜೆರ್ಸಿ’ ಚಿತ್ರದ ಹಿಂದಿ ರಿಮೇಕ್​. ಈ ಹಿಂದೆ ‘ಅರ್ಜುನ್​ ರೆಡ್ಡಿ’ ಚಿತ್ರವನ್ನು ಹಿಂದಿಯಲ್ಲಿ ‘ಕಬೀರ್​ ಸಿಂಗ್​’ ಎಂದು ರಿಮೇಕ್​ ಮಾಡಿದ್ದ ಶಾಹಿದ್​ ಕಪೂರ್​ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಈ ಬಾರಿ ಕೂಡ ಅವರು ಅಂಥದ್ದೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಅಬ್ಬರದ ಎದುರಿನಲ್ಲಿ ‘ಜೆರ್ಸಿ’ ಗೆಲ್ಲುವುದು ಕಷ್ಟ ಎಂದು ಸ್ವತಃ ಈ ಸಿನಿಮಾದ ನಿರ್ಮಾಪಕರಿಗೆ ಅನಿಸಿದೆ.

‘ನಾವು ಜೆರ್ಸಿ ಸಿನಿಮಾವನ್ನು ತುಂಬ ಕಷ್ಟಪಟ್ಟು ಮಾಡಿದ್ದೇವೆ. ಹೆಚ್ಚಿನ ಜನರನ್ನು ಈ ಚಿತ್ರ ತಲುಪಬೇಕು. ಹಾಗಾಗಿ ಏ.22ರಂದು ಬಿಡುಗಡೆ ಮಾಡುತ್ತೇವೆ’ ಎಂದು ಚಿತ್ರತಂಡ ತಿಳಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಜೆರ್ಸಿ’ ತೆರೆಕಂಡಿರಬೇಕಿತ್ತು. ಕಳೆದ ವರ್ಷ ಡಿಸೆಂಬರ್​ನಲ್ಲಿಯೇ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ರಿಲೀಸ್​ ಮುಂದೂಡಲ್ಪಟ್ಟಿತ್ತು. ನಂತರ ಚಿತ್ರತಂಡ ಆಯ್ಕೆ ಮಾಡಿಕೊಂಡಿದ್ದು ಏ.14ರ ದಿನಾಂಕವನ್ನು. ಆಗಿದ್ದಾಗಲೀ ‘ಕೆಜಿಎಫ್​ 2’ಗೆ ಪೈಪೋಟಿ ನೀಡಿಯೇ ಬಿಡೋಣ ಎಂದುಕೊಂಡಿದ್ದ ‘ಜೆರ್ಸಿ’ ತಂಡಕ್ಕೆ ಕೊನೇ ಕ್ಷಣದಲ್ಲಿ ಭಯ ಕಾಡಿದಂತಿದೆ. ಹಾಗಾಗಿ ರಿಲೀಸ್​ ಡೇಟ್​ ಮುಂದೂಡಿಕೆಯ ನಿರ್ಧಾರಕ್ಕೆ ಬಂದಿದೆ.

ಉತ್ತರ ಭಾರತದಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಈ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾ ಮೂಲಕ ಯಶ್​ಗೆ ಅತಿ ದೊಡ್ಡ ಯಶಸ್ಸು ಸಿಗುವ ನಿರೀಕ್ಷೆ. ತಮಿಳಿನ ‘ಬೀಸ್ಟ್​’ ಸಿನಿಮಾ ಏ.13ರಂದು ತೆರೆಕಾಣಲಿದೆ. ಆ ಕಾರಣದಿಂದಲೂ ‘ಜೆರ್ಸಿ’ ಚಿತ್ರ ಹಿಂದೆ ಸರಿದಿದೆ.

ಇದನ್ನೂ ಓದಿ:

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನ ಯಶ್​ ಅಭಿಮಾನಿಗಳೇ ಮಾಡಿದ್ರು ದಾಖಲೆ; ಇಲ್ಲಿದೆ ವಿಡಿಯೋ

‘ಕೆಜಿಎಫ್​: ಚಾಪ್ಟರ್​ 2’ ರಿಲೀಸ್​ ಹೊಸ್ತಿಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದ ಯಶ್​

Published On - 1:03 pm, Mon, 11 April 22

ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ