ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ:ರಾಜಕೀಯ ಜೀವನ ಅಂತ್ಯ ಎಂದ ಅಶೋಕ್

Updated on: Jun 30, 2026 | 7:49 PM

ಮುಖ್ಯಾಂಶಗಳು

  • ಅಡ್ಡ ಮತದಾನ ಆರೋಪ ಸಂಬಂಧ ಧರ್ಮಸ್ಥಳದಲ್ಲಿ ಶಾಸಕ ಹೆಚ್.ಕೆ.ಸುರೇಶ್​ ಆಣೆ ಪ್ರಮಾಣ
  • ಅಡ್ಡ ಮತದಾನ ಮಾಡಿರುವ ಶಾಸಕರ ಪಟ್ಟಿ ದೆಹಲಿಯಲ್ಲಿದ್ದು, ಕ್ರಮವಾಗಲಿದೆ
  • ಯಾರೂ ಆಣೆ ಪ್ರಮಾಣ ಮಾಡಬೇಡಿ ಎಂದ ವಿಪಕ್ಷ ನಾಯಕ ಆರ್.ಅಶೋಕ್

ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರು ಮಾಡಿದ ಅಡ್ಡಮತದಾನ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲ ಶಾಸಕರ ಮೇಲೆ ಅನುಮಾನ ವ್ಯಕ್ತವಾಗಿದೆ. ಅ ಪಟ್ಟಿಯಲ್ಲಿ ಶಾಸಕ ಹೆಚ್.ಕೆ.ಸುರೇಶ್ ಹೆಸರು ಕೇಳಿಬಂದಿದ್ದರಿಂದ ಅವರು ಇಂದು (ಜೂನ್ 30) ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಈ ಮೂಲಕ ನಾನು ಅಡ್ಡಮತದಾನ ಮಾಡಿಲ್ಲ ಎಂದಿದ್ದಾರೆ. ಇನ್ನು ಈ ಬಗ್ಗೆ ವಿಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಅಡ್ಡ ಮತದಾನ ಮಾಡಿರುವ ಶಾಸಕರ ಪಟ್ಟಿ ದೆಹಲಿಯಲ್ಲಿದ್ದು, ಯಾರೂ ಆಣೆ ಪ್ರಮಾಣ ಮಾಡಬೇಡಿ. ಕೇಂದ್ರದವರು ಪತ್ತೆ ಹಚ್ಚುತ್ತಾರೆ. ಸರಿಯಾಗಿ ಏಟು ಕೊಡುತ್ತೇವೆ. ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದರು.

ಬೆಂಗಳೂರು, (ಜೂನ್ 30): ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರು ಮಾಡಿದ ಅಡ್ಡಮತದಾನ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲ ಶಾಸಕರ ಮೇಲೆ ಅನುಮಾನ ವ್ಯಕ್ತವಾಗಿದೆ. ಅ ಪಟ್ಟಿಯಲ್ಲಿ ಶಾಸಕ ಹೆಚ್.ಕೆ.ಸುರೇಶ್ ಹೆಸರು ಕೇಳಿಬಂದಿದ್ದರಿಂದ ಅವರು ಇಂದು (ಜೂನ್ 30) ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಈ ಮೂಲಕ ನಾನು ಅಡ್ಡಮತದಾನ ಮಾಡಿಲ್ಲ ಎಂದಿದ್ದಾರೆ. ಇನ್ನು ಈ ಬಗ್ಗೆ ವಿಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಅಡ್ಡ ಮತದಾನ ಮಾಡಿರುವ ಶಾಸಕರ ಪಟ್ಟಿ ದೆಹಲಿಯಲ್ಲಿದ್ದು, ಯಾರೂ ಆಣೆ ಪ್ರಮಾಣ ಮಾಡಬೇಡಿ. ಕೇಂದ್ರದವರು ಪತ್ತೆ ಹಚ್ಚುತ್ತಾರೆ. ಸರಿಯಾಗಿ ಏಟು ಕೊಡುತ್ತೇವೆ. ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us