AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ

ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ

ರಾಜೇಶ್ ದುಗ್ಗುಮನೆ
|

Updated on:Jul 23, 2026 | 8:38 AM

Share

ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ರಾಗಿಣಿ ದ್ವಿವೇದಿ ಮಾತನಾಡಿದರು. ಈ ಸಿನಿಮಾ ತಮಗೆ ಒಂದು ವಿಭಿನ್ನ ಪ್ರಯಾಣವಾಗಿದ್ದು, ಕಥೆ ಕೇಳಿದಾಗ ತಾವೇ ಈ ಪಾತ್ರ ಮಾಡಬಹುದೇ ಎಂದು ಅಚ್ಚರಿಪಟ್ಟಿದ್ದಾಗಿ ಹೇಳಿದರು. ಅಂಬರೀಷ್ ಅವರ ಆಶೀರ್ವಾದ ಹಾಗೂ ಸ್ಪೂರ್ತಿಯು ಚಿತ್ರಕ್ಕೆ ಇದೆ ಎಂದು ತಿಳಿಸಿದರು.

ಬಹುನಿರೀಕ್ಷಿತ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ಈ ಸಿನಿಮಾ ತಮಗೆ ಕೇವಲ ಒಂದು ಚಿತ್ರವಲ್ಲ, ಅದೊಂದು ಸುಂದರ ಪ್ರಯಾಣ ಎಂದು ಬಣ್ಣಿಸಿದರು. ಈ ಕಥೆಯನ್ನು ಕೇಳಿದಾಗ, ತಮ್ಮ ವಿಭಿನ್ನ ಇಮೇಜ್‌ನಿಂದಾಗಿ ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುತ್ತದೆಯೇ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡರಂತೆ.

ರಾಗಿಣಿ ದ್ವಿವೇದಿ ಅವರು, ಚಿತ್ರದ ಪಾತ್ರಕ್ಕಾಗಿ ಹಲವು ಹೋಮ್‌ವರ್ಕ್‌ ಮತ್ತು ಕಾರ್ಯಾಗಾರಗಳನ್ನು ನಡೆಸಿದ ಬಗ್ಗೆ ವಿವರಿಸಿದರು. ಲೇಖಕರ ಬರಹ ಶೈಲಿ, ಸಂಭಾಷಣೆಗಳು ಮತ್ತು ಚಿತ್ರದ ಧ್ವನಿಯು ಸವಾಲಿನಿಂದ ಕೂಡಿದ್ದು, ಇದು ಅಮೇಜಿಂಗ್ ಅನುಭವ ನೀಡಿದೆ ಎಂದರು. ಇಡೀ ತಂಡಕ್ಕೆ ಅಂಬರೀಷ್ ಅಂಕಲ್ ಅವರ ಆಶೀರ್ವಾದವಿದೆ. ಮಂಡ್ಯದಲ್ಲಿ, ಅಂಬಿ ಅಂಕಲ್ ಅವರ ಊರಿನಲ್ಲಿಯೇ ಚಿತ್ರೀಕರಣ ನಡೆಸಿರುವುದು ವಿಶೇಷ. ಕನ್ನಡ ಚಿತ್ರರಂಗಕ್ಕೆ ಅಂಬರೀಷ್ ಅವರ ಕೊಡುಗೆಯನ್ನು ಸ್ಮರಿಸಿದ ರಾಗಿಣಿ, ಇದು ಭಾವನಾತ್ಮಕ ಪ್ರಯಾಣ ಎಂದು ಹೇಳಿದರು. ಸರಳ ಕುಟುಂಬದ ಕಥೆ, ಪ್ರೀತಿ ಮತ್ತು ತ್ಯಾಗದ ಬಗ್ಗೆ ಚಿತ್ರವಿರುವುದಾಗಿ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 23, 2026 08:37 AM

Follow Us