ಬೆಂಗಳೂರು: ಮಕ್ಕಳನ್ನು ಶಾಲೆಗೆ ಕಳಿಸಲು ಥರ್ಮೋಕೋಲ್ ಶೀಟನ್ನು ಬೋಟ್​ನಂತೆ ಬಳಸಿದ ಪೋಷಕರು

ಅರುಣ್​ ಕುಮಾರ್​ ಬೆಳ್ಳಿ

Updated on: Oct 24, 2024 | 11:35 AM

ಜಲಪ್ರಳಯದಂಥ ಸ್ಥಿತಿಯಲ್ಲಿ ಎನ್​ಡಿಅರ್​ಎಫ್ ಅಥವಾ ಎಸ್​ಡಿಅರ್​ಎಫ್ ಸಿಬ್ಬಂದಿ ಬಳಸುವ ಬೋಟ್​ಗಳ ವ್ಯವಸ್ಥೆ ಮಾಡುವ ಯೋಗ್ಯತೆಯೂ ಬಿಬಿಎಂಪಿಗೆ ಇಲ್ಲದೆ ಹೋಯಿತೇ ಎಂದು ನಗರದ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಧೋ ಅಂತ ಮಳೆ ಸುರಿದಾಗ ಸಾಯಿ ಲೇಔಟ್​ನಂತೆ ನಗರದ ಹಲವಾರು ಬಡಾವಣೆಗಳು ಇಂಥ ಸ್ಥಿತಿ ಎದುರಿಸುತ್ತವೆ

ಬೆಂಗಳೂರು: ನಗರದ ಕೊತ್ತನೂರು ಪ್ರದೇಶದಲ್ಲಿರುವ ಸಾಯಿ ಲೇಔಟ್ ಸ್ಥಿತಿ ಇದು. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಥರ್ಮೋಕೋಲ್ ಶೀಟನ್ನು ಬೋಟ್ ಹಾಗೆ ಬಳಸಿದ್ದಾರೆ. ನಮ್ಮ ವರದಿಗಾರನೊಂದಿಗೆ ಅವರು ಹೇಳಿಕೊಳ್ಳುತ್ತಿರುವ ಸಮಸ್ಯೆಯನ್ನು ಕೇಳಿಸಿಕೊಳ್ಳಿ. ಇದು ಮೇಕ್​ಶಿಫ್ಟ್ ಬೋಟ್, ಏನಾದರೂ ಹೆಚ್ಚು ಕಡಿಮೆಯಾದರೆ ಮಕ್ಕಳು ನೀರಿಗೆ ಬೀಳುತ್ತವೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಕೈಲಿ ನಾಮಪತ್ರ ಹಾಕಿಸುವಲ್ಲಿ ಬ್ಯೂಸಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.