ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿಲ್ಲ. ಅವರನ್ನು ಸೀಕ್ರೆಟ್ ರೂಂನಲ್ಲಿ ಕೂರಿಸಲಾಗಿದೆ. ಅವರಿಗೆ ಈಗ ಹೊಸ ಚಿಂತೆ ಶುರವಾಗಿದೆ. ಏನು ಆ ಚಿಂತೆ? ಆ ಬಗ್ಗೆ ಇಲ್ಲಿದೆ ವಿವರ. ಅವರು ಚಿಂತೆಯನ್ನು ಯಾರು ದೂರ ಮಾಡುತ್ತಾರೆ ನೋಡಬೇಕಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್ ಮೂಲಕ ಹೊರಕ್ಕೆ ತಂದು ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದೆ. ಧ್ರುವಂತ್ ಹಾಗೂ ರಕ್ಷಿತಾ ಮಧ್ಯೆ ಮೊದಲಿನಿಂದ ಯಾವುದೂ ಸರಿ ಇಲ್ಲ. ಈಗ ಇಬ್ಬರೂ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಬಂದಿರುವುದು ರಕ್ಷಿತಾ ಚಿಂತೆಗೆ ಕಾರಣ ಆಗಿದೆ. ಅವರಿಗೆ ಎಲಿಮಿನೇಷನ್ ಆಗಿಲ್ಲ ಎಂಬ ಖುಷಿ ಒಂದು ಕಡೆಯಾದರೆ, ಧ್ರುವಂತ್ ಜೊತೆ ಇರಬೇಕಲ್ಲ ಎಂಬ ಬೇಸರ ಮತ್ತೊಂದು ಕಡೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 15, 2025 08:18 AM
Latest Videos

