ರಾಮನಗರ: ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಬರ್ತಿದ್ದಂತೆ ಗಲ್ಲ ಸವರಿ ತಬ್ಬಿಕೊಂಡ ತಾಯಂದಿರು-ಇಲ್ಲಿದೆ ವಿಡಿಯೋ
ಇಂದು(ಮಾ.02) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ(Channapatana)ದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರನ್ನು ಸಮಾವೇಶಕ್ಕೆ ಬಂದಿದ್ದ ತಾಯಂದಿರು ಗಲ್ಲ ಸವರಿ ತಬ್ಬಿಕೊಂಡು ಆರ್ಶಿವದಿಸಿದರು.
ರಾಮನಗರ, ಮಾ.02: ಗ್ಯಾರಂಟಿ ಯೋಜನೆಗಳ ಬೃಹತ್ ಸಮಾವೇಶವನ್ನು ಇಂದು(ಮಾ.02) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ(Channapatana)ದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರನ್ನು ಸಮಾವೇಶಕ್ಕೆ ಬಂದಿದ್ದ ತಾಯಂದಿರು ಗಲ್ಲ ಸವರಿ ತಬ್ಬಿಕೊಂಡು ಆರ್ಶಿವದಿಸಿದರು. ಡಿಸಿಎಂಗೆ ಎಂಎಲ್ಸಿ ಪುಟ್ಟಣ್ಣ ಸಾಥ್ ನೀಡಿದರು. ಇನ್ನು ಈ ವೇಳೆ ಮಾತನಾಡಿದ ಅವರು, ‘ ನನಗೂ ಒಂದ್ ಕಾಲದಲ್ಲಿ ಚನ್ನಪಟ್ಟಣ ಅಸೆಂಬ್ಲಿ ನಿಲ್ಲುವ ಆಸೆ ಇತ್ತು. ರಾಜಕಾರಣದಲ್ಲಿ ಯಾವ ಸಂದರ್ಭ ಬರುತ್ತೋ ನನಗೆ ಗೊತ್ತಿಲ್ಲ. ಚನ್ನಪಟ್ಟಣ ಮತದಾರರಿಗೆ ಮನವಿ ಮಾಡ್ಕೋತಿನಿ, ಯಾವ್ಯಾವ ಸಂದರ್ಭದಲ್ಲಿ ಯಾರು ಏನೇನ್ ಮಾತಾಡಿದ್ದಾರೆ ಎಂದು ದಾಖಲೆ ಇದೆ. ಚನ್ನಪಟ್ಟಣ ರಾಮನಗರ ದ ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಹೇಳುತ್ತೇನೆ. ನಿಮ್ಮ ವಯಸ್ಸು ಹಿಂದೆ ಹೋಗಲ್ಲ,ಮುಂದಕ್ಕೆ ಹೋಯ್ತಾ ಇರ್ತದೆ. ಹತ್ತು ವರ್ಷ ನಮ್ಮ ಸರ್ಕಾರ ಇದ್ದೇ ಇರುತ್ತದೆ. ನನಗಷ್ಟೂ ಭರವಸೆ ಇದೆ ಎಂದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ತವರಿನಲ್ಲಿ ಗೆದ್ದ ಆರ್ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ

ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ

‘ರಾಜ್ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
