Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆಹೊನ್ನೂರಲ್ಲಿ ಕಳಚಿದ ಖಾಸಗಿ ಬಸ್ಸಿನ ಹಿಂಬದಿ ಚಕ್ರ, ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ

ಬಾಳೆಹೊನ್ನೂರಲ್ಲಿ ಕಳಚಿದ ಖಾಸಗಿ ಬಸ್ಸಿನ ಹಿಂಬದಿ ಚಕ್ರ, ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 17, 2024 | 11:29 AM

ಚಲಿಸುವ ವಾಹನ ಯಾವುದೇ ಆಗಿರಲಿ, ಅದರ ಮುಂದಿನ ಚಕ್ರ ಕಳಚಿದರೆ ದೊಡ್ಡ ಅನಾಹುತವಾಗುತ್ತದೆ. ವಾಹನಗಳು ಸಮತೋಲನ ತಪ್ಪಿ ಮುಗುಚಿ ಬೀಳುತ್ತವೆ ಮತ್ತು ವಾಹನ ದೊಡ್ಡದ್ದಾಗಿದ್ದರೆ ಮತ್ತು ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದರೆ ಪ್ರಾಣಹಾನಿ ನಿಶ್ಚಿತವಾಗಿ ಸಂಭವಿಸುತ್ತದೆ. ಅಂಥ ಹಲವು ದುರ್ಘಟನೆಗಳನ್ನು ನಾವು ವರದಿ ಮಾಡಿದ್ದೇವೆ.

ಚಿಕ್ಕಮಗಳೂರು: ಸಾಮಾನ್ಯವಾಗಿ ಇಂಥ ದೃಶ್ಯಗಳು ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗೋದು ವಿರಳ. ಜಿಲ್ಲೆಯ ಎನ್ ಅರ್ ಪುರ ತಾಲೂಕಿನ ಬಾಳೆಹೊನ್ನೂರಲ್ಲಿರುವ ರೋಟರಿ ಸರ್ಕಲ್ ಮುಂದಿನಿಂದ ಖಾಸಗಿ ಬಸ್ಸೊಂದು ಹಾದುಹೋಗುತ್ತಿದ್ದಾಗ ಅದರ ಹಿಂಬದಿಯ ಟೈರ್ ಗಳು ಕಳಚಿಕೊಂಡು ವಾಹನದಿಂದ ಬೇರ್ಪಟ್ಟು ರಸ್ತೆಯ ಮತ್ತೊಂದು ಬದಿಗೆ ಹೋಗುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಬಸ್ಸು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಕಾರಣ ಪ್ರಾಣಪಾಯವೇನೂ ಸಂಭವಿಸಿಲ್ಲ. ನಮ್ಮ ಚಿಕ್ಕಮಗಳೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಈ ಬಸ್ಸು ಬೆಂಗಳೂರು ನಗರದಿಂದ ಶೃಂಗೇರಿಗೆ ತೆರಳುತ್ತಿತ್ತು. ಹಿಂದಿನ ಟೈರ್ ಕಳಚಿಕೊಳ್ಳುವ ಸ್ಥಿಯಲ್ಲಿರುವುದು ಪ್ರಾಯಶಃ ಚಾಲಕನ ಗಮನಕ್ಕೆ ಬಂದಿರಬಹುದು. ಅಥವಾ ಬಸ್ಸು ಸರ್ಕಲ್ ಮೂಲಕ ಹಾದು ಹೋಗುತ್ತಿದ್ದ ಕಾರಣಕ್ಕೆ ವೇಗ ತಗ್ಗಿಸಿರಬಹುದು. ಅದೇನೆ ಇರಲಿ ಮಾರಾಯ್ರೇ, ಯಾವುದೇ ಅನಾಹುತ ಉಂಟಾಗದಿರುವುದು ಸಮಾಧಾನಕರ ಸಂಗತಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಚಲುಸುತ್ತಿರುವಾಗ್ಲೇ ಕಳಚಿದ ಬಸ್​ ಟೈರ್, ಅಬ್ಬಾ..ಬದುಕಿದೆವು ಎಂದು ನಿಟ್ಟುಸಿರು ಬಿಟ್ಟ ಪ್ರಯಾಣಿಕರು: ವಿಡಿಯೋ ವೈರಲ್