ಹೊಯ್ಸಳ ಪದ ಹುಟ್ಟಿಗೆ ಕಾರಣವೇನು ಗೊತ್ತಾ? ವಸಂತಿಕಾದೇವಿ ದೇವಾಲಯದ ಇತಿಹಾಸ ಇಲ್ಲಿದೆ

Edited By: ಆಯೇಷಾ ಬಾನು

Updated on: Sep 20, 2021 | 6:56 AM

ಸಳನ ನಿಜವಾದ ಹೆಸರು ನೃಪಕಾಮ, ಅಂಗಡಿಯ ಮೂಲ ಹೆಸರು ಶಶಕಪುರ. ಹೊಯ್ಸಳ ಶಬ್ದ ಹುಟ್ಟಿ, ನೃಪಕಾಮ ರಾಜನಾಗಲು ಕಾರಣಿಭೂತವಾದ ಸ್ಥಳ ವಸಂತಿಕಾದೇವಿ ದೇವಸ್ಥಾನ.

ಚಿಕ್ಕಮಗಳೂರು: ಹೊಯ್ಸಳರ ಮೂಲಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮಲ್ಲಿದೆ ಪುರಾತನ ವಸಂತಿಕಾದೇವಿ ದೇವಸ್ಥಾನ. ಅಂಗಡಿ ಗುರುಕುಲದಲ್ಲಿ ಪಾಠ ನಡೆಯುವಾಗ ಹುಲಿಯೊಂದು ಅಲ್ಲಿಗೆ ಬರುತ್ತದೆ. ಆ ವೇಳೆ ಗುರು ಸುದತ್ತಚಾರ್ಯರಿಂದ ಶಿಷ್ಯ ಸಳನಿಗೆ ಹುಲಿ ಓಡಿಸಲು ಸೂಚನೆ ನೀಡುತ್ತಾರೆ. ಪೊಯ್ ಸಳ (ಸಳ ಹೊಡಿ) ಅಂತಾ ಹುಲಿಯನ್ನ ಹೊಡೆಯಲು ಹೇಳುತ್ತಾರೆ. ಹುಲಿಯನ್ನ ಸಂಹಾರ ಮಾಡುವ ಸಳನನ್ನ ಕಲ್ಯಾಣಿ ಚಾಲುಕ್ಯರು ರಾಜನಾಗಿ ಮಾಡುತ್ತಾರೆ. ಈ ರೀತಿ ಮೊಟ್ಟ ಮೊದಲ ಬಾರಿಗೆ ಹೊಯ್(ಪೊಯ್) ಸಳ ಶಬ್ದ ಹುಟ್ಟಿ ಹೊಯ್ಸಳ ಆಗಿ ಮಾರ್ಪಾಡಾಗುತ್ತದೆ. ಸಳನ ನಿಜವಾದ ಹೆಸರು ನೃಪಕಾಮ, ಅಂಗಡಿಯ ಮೂಲ ಹೆಸರು ಶಶಕಪುರ. ಹೊಯ್ಸಳ ಶಬ್ದ ಹುಟ್ಟಿ, ನೃಪಕಾಮ ರಾಜನಾಗಲು ಕಾರಣಿಭೂತವಾದ ಸ್ಥಳ ವಸಂತಿಕಾದೇವಿ ದೇವಸ್ಥಾನ.

Loading...
Unable to load recommendations.
Follow Us