Koppal: ಹುಲಿಗಿ ಗ್ರಾಮದಲ್ಲಿ ರೇಲ್ವೇ ಸೇತುವೆ ಮಾಡಿಸಿಕೊಡುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಸಚಿವ ಆನಂದ್ ಸಿಂಗ್ ಗೆ ಗ್ರಾಮಸ್ಥರಿಂದ ತರಾಟೆ
ಆದರೆ ಇಂದು ಹುಲಿಗೆ ಗ್ರಾಮದಲ್ಲಿ ಅಮ್ಮ ನಿಲಯ ಉದ್ಘಾಟನೆಗೆ ಬಂದಿದ್ದ ಆನಂದ್ ಸಿಂಗ್ ರನ್ನು ಗ್ರಾಮಸ್ಥರು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡರು.
ಕೊಪ್ಪಳ: ಜಿಲ್ಲೆಯ ಕೊಪ್ಪಳ ತಾಲೂಕಿನ ಹುಲಿಗೆ ಗ್ರಾಮದ ಜನ ಇಂದು ಸಚಿವ ಆನಂದ್ ಸಿಂಗ್ (Anand Singh) ವಿರುದ್ಧ ರೊಚ್ಚಿಗೆದ್ದಿದ್ದರು. ಅದಕ್ಕೆ ಕಾರಣ ಇಲ್ಲದಿಲ್ಲ. ಗ್ರಾಮಸ್ಥರಿಗೆ ಒಂದು ರೇಲ್ವೇ ಸೇತುವೆ (railway bridge) ಬೇಕಾಗಿದೆ ಮತ್ತು ಮೂರು ವರ್ಷಗಳ ಹಿಂದೆ ಅದನ್ನು ಮಾಡಿಸಿಕೊಡುವ ಆಶ್ವಾಸನೆಯನ್ನು ಸಚಿವರು ಗ್ರಾಮಸ್ಥರಿಗೆ ನೀಡಿದ್ದರು. ಆದರೆ ಸೇತುವೆ ಕೆಲಸ ಆರಂಭವಾಗಿಲ್ಲ. ಸಚಿವರು ಪ್ರತಿಬಾರಿ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಅನಿಸುತ್ತೆ. ಆದರೆ ಇಂದು ಹುಲಿಗೆ ಗ್ರಾಮದಲ್ಲಿ ಅಮ್ಮ ನಿಲಯ ಉದ್ಘಾಟನೆಗೆ ಬಂದಿದ್ದ ಆನಂದ್ ಸಿಂಗ್ ರನ್ನು ಗ್ರಾಮಸ್ಥರು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡರು. ಜನರ ಆಕ್ರೋಶ ಕಂಡು ಬೆಚ್ಚಿದ ಸಚಿವರ ಬಾಯಿಂದ ಮಾತೇ ಹೊರಡದಂತಾಗಿತ್ತು. ಅನಂದ್ ಅವರೊಂದಿಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್, ಸಚಿವ ಹಾಲಪ್ಪ ಆಚಾರ್ (Halappa Achaar) ಮತ್ತು ಸಂಸದ ಸಂಗಣ್ಣ ಕರಡಿ ಸಹ ಗ್ರಾಮಸ್ಥರ ಕೋಪಕ್ಕೀಡಾದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

