ಬೆಂಗಳೂರು ನಗರದಲ್ಲಿಂದು ಸಾಯಂಕಾಲ ಮಳೆ, ಬೇಸಿಗೆಯ ತಾಪದಿಂದ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್
ಮಳೆಯಿಂದ ಆಶ್ರಯ ಪಡೆಯಲು ಜನ ಅಂಗಡಿ ಮುಂಗಟ್ಟುಗಳನ್ನು, ಫ್ಲೈಓವರ್ಗಳ ಕೆಳಭಾಗವನ್ನು ಆಶ್ರಯಿಸಿಕೊಳ್ಳುವುದು ಸಾಮಾನ್ಯ ದೃಶ್ಯ. ಇವತ್ತು ಡಾ ಬಿಅರ್ ಅಂಬೇಡ್ಕರ್ ಅವರ ಜನ್ಮ ವಾರ್ಷಿಕೋತ್ಸವದ ನಿಮಿತ್ತ ವಿಧಾನಸೌಧ ಮುಂದೆ ಪ್ರತಿವರ್ಷದಂತೆ ಈ ಸಲವೂ ದೊಡ್ಡ ದೊಡ್ಡ ಪೆಂಡಾಲ್ಗಳನ್ನು ಹಾಕಲಾಗಿತ್ತು, ಜನ ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲಿ ಆಶ್ರಯ ಪಡೆದರು.
ಬೆಂಗಳೂರು, ಏಪ್ರಿಲ್ 14: ಮಧ್ಯಾಹ್ನ ಬಿಸಿಲಿಂದ ಧಗಧಗಿಸುತ್ತಿದ್ದ ಬೆಂಗಳೂರು ಮಹಾನಗರ ಸಾಯಂಕಾಲ ಸುರಿದ ಮಳೆಗೆ ತಂಪಾಯಿತು ಮಾರಾಯ್ರೇ. ನಗರ ಹಲವಾರು ಭಾಗಗಳಲ್ಲಿ ಸಾಧಾರಣ ಮತ್ತು ಹಗುರ ಮಳೆಯಾಗಿದೆ. ಮೆಜೆಸ್ಟಿಕ್ ಏರಿಯ, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಕೆಅರ್ ಸರ್ಕಲ್, ಕೆಆರ್ ಮಾರ್ಕೆಟ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಶಾಂತಿನಗರ, ವಿಲ್ಸನ್ ಗಾರ್ಡನ್, ಜಯನಗರ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ಸಾಮಾನ್ಯ ಜನಜೀವನ ಮತ್ತು ವಾಹನ ಸಂಚಾರ ಕೊಂಚಮಟ್ಟಿಗೆ ಪ್ರಭಾವಕ್ಕೊಳಗಾಗಿದ್ದವು.
ಇದನ್ನೂ ಓದಿ: Karnataka Rains: ಬೆಂಗಳೂರಿನಲ್ಲಿ ಇಂದು ಧಾರಾಕಾರ ಮಳೆ ಸಾಧ್ಯತೆ, ಕರ್ನಾಟಕದ 20 ಜಿಲ್ಲೆಗಳಿಗೆ ಅಲರ್ಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

