ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ವಿಜಯ್ ಗೆದ್ದರು; ರಿಷಿಕಾ ಸಿಂಗ್ ಈ ರೀತಿ ಹೇಳಿದ್ದೇಕೆ?
ನಟಿ ರಿಷಿಕಾ ಸಿಂಗ್ ಅವರು ಅಪಘಾತದ ಬಳಿಕ ಪೂರ್ತಿ ಚೇತರಿಸಿಕೊಂಡು ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಮಾತಿಗೆ ಸಿಕ್ಕ ಅವರು ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರು ಮುಖ್ಯಮಂತ್ರಿ ಆಗಿದ್ದಾರೆ. ಈ ಕುರಿತು ರಿಷಿಕಾ ಮಾತನಾಡಿದ್ದಾರೆ.
ನಟಿ ರಿಷಿಕಾ ಸಿಂಗ್ (Rishika Singh) ಅವರು ಅಪಘಾತದ ಬಳಿಕ ಚೇತರಿಸಿಕೊಂಡರು. ಮತ್ತೆ ಬಣ್ಣದ ಲೋಕಕ್ಕೆ ಕಮ್ಬ್ಯಾಕ್ ಮಾಡಲು ಅವರು ಸಜ್ಜಾಗಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಮಾತಿಗೆ ಸಿಕ್ಕ ಅವರು ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ (Thalapathy Vijay) ಅವರು ಟಿವಿಕೆ ಪಕ್ಷ ಕಟ್ಟಿ, ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ಈ ಕುರಿತು ರಿಷಿಕಾ ಸಿಂಗ್ ಮಾತನಾಡಿದ್ದಾರೆ. ‘ವಿಜಯ್ ಮಾಡಿದ್ದು ಸರಿಯೋ ತಪ್ಪೋ ಅಂತ ಹೇಳುವಷ್ಟು ದೊಡ್ಡವಳು ನಾನಲ್ಲ. ವಿಜಯ್ ಅವರು ತ್ರಿಶಾ ಜೊತೆ ಮೈತ್ರಿ ಮಾಡಿಕೊಂಡರು. ಅವರ ನಡುವೆ ನನಗೆ ಒಂದು ಸುಂದರವಾದ ಸ್ನೇಹ ಕಾಣಿಸುತ್ತದೆ. ಅವರ ವೈಯಕ್ತಿಕ ವಿಚಾರ ನಮಗೆ ಬೇಡ. ಕರ್ನಾಟಕದಲ್ಲಿ ಯಾರಾದರೂ ಆ ರೀತಿ ಗೆಲ್ಲಲು ಬಹಳ ಕಷ್ಟ ಇದೆ. ಯಾಕೆಂದರೆ ತ್ರಿಶಾ ಬೇಕಲ್ಲವಾ’ ಎಂದು ರಿಶಿಕಾ ಸಿಂಗ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
