ಕಲಬುರಗಿ: ಎಟಿಎಂನಲ್ಲಿರುವ ಸಿಸಿಟಿವಿ ಕೆಮೆರಾಗಳಿಗೆ ಕಪ್ಪುಮಸಿ ಸ್ಪ್ರೇ ಮಾಡಿ ₹ 18 ಲಕ್ಷ ದರೋಡೆ
ಬೀದರ್ ದರೋಡೆಕೋರರು ಮತ್ತು ಕೊಲೆಗಡುಕರನ್ನು ಈ ಭಾಗದ ಪೊಲೀಸರು ಸೆರೆಹಿಡಿದಿದ್ದರೆ ಕಲಬುರಗಿಯಲ್ಲಿ ದರೋಡೆ ಪ್ರಕರಣ ಪ್ರಾಯಶಃ ನಡೆಯುತ್ತಿರಲಿಲ್ಲ. ಇಲ್ಲಿ ಹಣ ದೋಚಿದ್ದು ಅದೇ ಗ್ಯಾಂಗ್ ಇಲ್ಲವೇ ಹರಿಯಾಣ ಮೂಲದವರು ಎಂದು ಶಂಕಿಸಲಾಗುತ್ತಿದೆ. ಈ ದರೋಡೆಕೋರರು ಮೊಬೈಲ್ ಫೋನ್ಗಳನ್ನು ಬಳಸುವುದಿಲ್ಲವಾದ್ದರಿಂದ ಟ್ರೇಸ್ ಮಾಡುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.
ಕಲಬುರಗಿ, ಏಪ್ರಿಲ್ 9: ಪೊಲೀಸರು ಚಾಪೆ ಕೆಳಗೆ ನುಸುಳಿದರೆ ಎಟಿಎಂಗಳನ್ನು ದರೋಡೆ ಮಾಡುವವರು ರಂಗೋಲಿ ಕೆಳಗೆ ನುಸುಳುತ್ತಾರೆ. ಬೀದರ್ ಎಟಿಎಂ ರಾಬರಿ ಮತ್ತು ಇಬ್ಬರು ಗಾರ್ಡ್ಗಳ ಕೊಲೆ ಪ್ರಕರಣ (Bidar robbery and murder case) ಇನ್ನೂ ಹಸಿಯಾಗಿರುವಾಗಲೇ, ಕಲಬುರಗಿಯ ಪೂಜಾರಿ ಚೌಕ್ನಲ್ಲಿರುವ ಎಸ್ಬಿಐ ಎಟಿಎಂ ಕಿಯಾಸ್ಕೊಂದರಿಂದ ದರೋಡೆಕೋರರು ₹18 ಲಕ್ಷ ದೋಚಿಕೊಂಡು ಪರಾರಿಯಾಗಿದ್ದಾರೆ. ದರೋಡೆ ಬೆಳಗಿನ ಜಾವ 3ಗಂಟೆ ಸುಮಾರಿಗೆ ನಡೆದಿದೆ ಮತ್ತು ಕಳ್ಳರು ತಮ್ಮ ಮುಖಗಳು ಎಟಿಎಂ ಕಿಯಾಸ್ಕ್ ಇರುವ ಕೋಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗದಿರಲು ಅವುಗಳಿಗೆ ಕಪ್ಪುಮಸಿಯನ್ನು ಸ್ಪ್ರೇ ಮಾಡಿದ್ದಾರೆ. ಕಿಯಾಸ್ಕ್ ಓಪನ್ ಮಾಡಲು ಕಳ್ಳರು ಗ್ಯಾಸ್ ಕಟ್ಟರ್ ಬಳಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆ ಯತ್ನ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ