AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದಿದ್ದು ಆರೆಸ್ಸೆಸ್ ಗೂಂಡಾಗಳು: ಸಿದ್ದರಾಮಯ್ಯ

ನನ್ನ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದಿದ್ದು ಆರೆಸ್ಸೆಸ್ ಗೂಂಡಾಗಳು: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 19, 2022 | 10:44 AM

Share

ಆಗಸ್ಟ್ 26ರಂದು ತಾವು ಪುನಃ ಕೊಡಗಿಗೆ ಬಂದು ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಮಡಿಕೇರಿ: ಗುರುವಾರದಂದು ಕೊಡಗು (Kodagu) ಜಿಲ್ಲೆಯಲ್ಲಿ ತಮ್ಮ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದವರು ಆರೆಸ್ಸೆಸ್ ಗೂಂಡಾಗಳೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಬೆಂಕಿಯುಗುಳಿದ್ದಾರೆ. ಘಟನೆಯ ನಂತರ ಚಿಕ್ಕಮಗಳೂರಿಗೆ ತೆರಳುವ ಮೊದಲು ಕೊಡ್ಲಿಪೇಟೆಯಲ್ಲಿ (Kodlipet) ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಸಿದ್ದರಾಮಯ್ಯ ಕೊಡಗು ಜಿಲ್ಲೆಯ ಪೊಲೀಸರನ್ನು ಸಹ ತರಾಟೆಗೆ ತೆಗೆದುಕೊಂಡರು. ಆಗಸ್ಟ್ 26ರಂದು ತಾವು ಪುನಃ ಕೊಡಗಿಗೆ ಬಂದು ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದರು.