‘ಮತ್ತೆ ಗುರುವಾರ ಬರ್ತೀನಿ’; ದರ್ಶನ್ ಭೇಟಿ ಬಗ್ಗೆ ಸಾಧು ಕೋಕಿಲ ಮಾತು
ನಟ ದರ್ಶನ್ ಅವರು ಚಿತ್ರರಂಗದ ಅನೇಕರ ಜೊತೆ ಒಡನಾಟ ಹೊಂದಿದ್ದಾರೆ. ಆದರೆ ಈಗ ಅವರು ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ಜೈಲಿನಲ್ಲಿ ಇದ್ದಾರೆ. ಅವರನ್ನು ನೋಡಲು ಸಾಧು ಕೋಕಿಲ ತೆರಳಿದ್ದರು. ಆದರೆ, ಅವರಿಗೆ ಸಿನಿಮಾಗೆ ಅವಕಾಶ ಸಿಕ್ಕಿಲ್ಲ.
ಸಾಧು ಕೋಕಿಲ ಅವರು ಮಂಗಳವಾರ (ಜುಲೈ 23) ದರ್ಶನ್ ಅವರನ್ನು ಭೇಟಿ ಮಾಡಲು ತೆರಳಿದ್ದರು. ಆದರೆ, ಭೇಟಿ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಸಾಧು ಕೋಕಿಲ ವಿವರಿಸಿದ್ದಾರೆ. ‘ನಾನು ದರ್ಶನ್ನ ಭೇಟಿ ಮಾಡಿಲ್ಲ. ಒಬ್ಬೊಬ್ಬರಿಗೆ ಎಂಟ್ರಿ ಕೊಡೋಕೆ ಆಗಲ್ಲ. ವಾರಕ್ಕೆ ಎರಡು ಬಾರಿ ಮಾತ್ರ ದರ್ಶನ್ ಭೇಟಿಗೆ ಅವಕಾಶ ಇದೆ. ಏನೂ ಮಾಡೊಕ್ಕೆ ಆಗಲ್ಲ. ನಾನು ಈಗ ಭೇಟಿ ಮಾಡಿದರೆ ಉಳಿದವರಿಗೆ ಅವಕಾಶ ಸಿಗುವುದಿಲ್ಲ. ಗುರುವಾರ ಮತ್ತೆ ಬರ್ತೀನಿ. ಯಾರೆಲ್ಲ ಭೇಟಿ ಮಾಡ್ತಾರೆ ಎಂದು ನೋಡಿಕೊಂಡು ನಿರ್ಧಾರ ಮಾಡ್ತೀವಿ’ ಎಂದು ಸಾಧು ಕೋಕಿಲ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.