Shivarajkumar: ‘ಶಿವಣ್ಣನೇ ಫಸ್ಟ್, ನಾನು ನೆಕ್ಸ್ಟ್; ರಾಜ್ ಕುಟುಂಬವೇ ನಮಗೆ ಹೆಡ್ ಆಫೀಸ್’ ಎಂದ ರವಿಚಂದ್ರನ್
ಸುದೀಪ್ ಮತ್ತು ಎಂಎನ್ ಕುಮಾರ್ ನಡುವೆ ಉಂಟಾಗಿರುವ ಜಗಳ ಈಗ ಬೇರೆ ಹಂತಕ್ಕೆ ಹೋಗಿದೆ. ಇಬ್ಬರ ನಡುವೆ ಸಂಧಾನ ಮಾಡಿಸಲು ಚಿತ್ರರಂಗದ ಹಿರಿಯರು ಪ್ರಯತ್ನ ಮಾಡುತ್ತಿದ್ದಾರೆ.
ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ (MN Kumar) ನಡುವೆ ಉಂಟಾಗಿರುವ ಜಗಳ ಈಗ ಬೇರೆ ಹಂತಕ್ಕೆ ಹೋಗಿದೆ. ಸುದೀಪ್ ಅವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಇಬ್ಬರ ನಡುವೆ ಸಂಧಾನ ಮಾಡಿಸಲು ಚಿತ್ರರಂಗದ ಹಿರಿಯರು ಪ್ರಯತ್ನ ಮಾಡುತ್ತಿದ್ದಾರೆ. ಶಿವರಾಜ್ಕುಮಾರ್ (Shivarajkumar) ಮತ್ತು ರವಿಚಂದ್ರನ್ ಅವರ ಸಮ್ಮುಖದಲ್ಲಿ ರಾಜಿ ಮಾಡಿಸುವ ಪ್ರಯತ್ನ ಜಾರಿಯಲ್ಲಿದೆ. ಈ ಕುರಿತು ರವಿಚಂದ್ರನ್ ಮಾತನಾಡಿದ್ದಾರೆ. ‘ಶಿವರಾಜ್ಕುಮಾರ್ ಅವರ ಬಳಿಯೇ ಮೊದಲು ಹೋಗಬೇಕು. ಅವರೇ ಫಸ್ಟ್. ನಾನು ಯಾವತ್ತಿದ್ದರೂ ನೆಕ್ಸ್ಟ್. ರಾಜ್ಕುಮಾರ್ ಅವರ ಫ್ಯಾಮಿಲಿಯೇ ಹೆಡ್ ಆಫೀಸ್. ಅವರ ಹೆಸರು ಹೇಳಿದರೆ ಅರ್ಧ ಸಮಸ್ಯೆ ಪರಿಹಾರ ಆಗುತ್ತದೆ’ ಎಂದು ರವಿಚಂದ್ರನ್ (Ravichandran) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us