ಮೋಸಗಾರರು ಏಳಿಗೆಯಾಗಲ್ಲ ಎಂದ ನಟ ಸಿದ್ದಾರ್ಥ್‌; ಸಮಂತಾರನ್ನು ನೆನಪು ಮಾಡಿಕೊಂಡ ನೆಟ್ಟಿಗರು

ನಾಗ ಚೈತನ್ಯ ಅವರನ್ನು ಪ್ರೀತಿಸಿ ಸಮಂತಾ ಮದುವೆ ಆದರು. ಈಗ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಇಬ್ಬರೂ ಬೇರೇ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ನಟ ಸಿದ್ದಾರ್ಥ್​ ಮಾಡಿರುವ ಟ್ವೀಟ್​ ಒಂದು ವೈರಲ್​ ಆಗುತ್ತಿದೆ

ಮೋಸಗಾರರು ಏಳಿಗೆಯಾಗಲ್ಲ ಎಂದ ನಟ ಸಿದ್ದಾರ್ಥ್‌; ಸಮಂತಾರನ್ನು ನೆನಪು ಮಾಡಿಕೊಂಡ ನೆಟ್ಟಿಗರು
| Updated By: ರಾಜೇಶ್ ದುಗ್ಗುಮನೆ

Updated on: Oct 03, 2021 | 5:17 PM

ಸಿದ್ದಾರ್ಥ್‌​ ಹಾಗೂ ಸಮಂತಾ ಅಕ್ಕಿನೇನಿ ಒಂದು ಕಾಲದಲ್ಲಿ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಕಾರಣಾಂತರಗಳಿಂದ ಇವರ ಸಂಬಂಧ ಮುರಿದು ಬಿದ್ದಿತ್ತು. ಆ ನಂತರ ನಾಗ ಚೈತನ್ಯ ಅವರನ್ನು ಪ್ರೀತಿಸಿ ಸಮಂತಾ ಮದುವೆ ಆದರು. ಈಗ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಇಬ್ಬರೂ ಬೇರೇ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ನಟ ಸಿದ್ದಾರ್ಥ್​ ಮಾಡಿರುವ ಟ್ವೀಟ್​ ಒಂದು ವೈರಲ್​ ಆಗುತ್ತಿದೆ. ಇದು ಸಮಂತಾ ಅವರ ಕುರಿತು ಮಾಡಿದ ಟ್ವೀಟ್​ ಎನ್ನಲಾಗುತ್ತಿದೆ.

ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠ, ‘ವಂಚಕರು ಎಂದಿಗೂ ಏಳಿಗೆಯಾಗಲ್ಲ’ ಎಂದು ಸಿದ್ದಾರ್ಥ್​ ಬರೆದುಕೊಂಡಿದ್ದಾರೆ. ಇದು ಸಮಂತಾ ಉದ್ದೇಶಿಸಿ ಮಾಡಿದ ಟ್ವೀಟ್​ ಎಂದು ಹೇಳಲಾಗುತ್ತಿದೆ. ಸಿದ್ದಾರ್ಥ್​ಗೆ ಎಲ್ಲರೂ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್​ಗೆ ಇದುವೇ ಕಾರಣ? ಅಕ್ಕಿನೇನಿ ಕುಟುಂಬದಲ್ಲಿ ಅಸಲಿಗೆ ಆಗಿದ್ದೇನು?

Follow us