AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ನೀರು ಹಂಚಿಕೆ ವಿವಾದವನ್ನು ಈಗ ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳುವುದು ಸಾಧ್ಯವಿಲ್ಲ: ತೇಜಸ್ವೀ ಸೂರ್ಯ, ಸಂಸದ

ಕಾವೇರಿ ನೀರು ಹಂಚಿಕೆ ವಿವಾದವನ್ನು ಈಗ ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳುವುದು ಸಾಧ್ಯವಿಲ್ಲ: ತೇಜಸ್ವೀ ಸೂರ್ಯ, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 27, 2023 | 4:58 PM

ಪ್ರಾಧಿಕಾರದ ಮುಂದೆ ಕರ್ನಾಟಕ ಸರ್ಕಾರ; ರಾಜ್ಯ ಎದುರಿಸುತ್ತಿರುವ ಸಂಕಷ್ಟವನ್ನು ಸಮರ್ಪಕವಾಗಿ ವಿವರಿಸದ ಕಾರಣ ಮತ್ತು ಸರ್ಕಾರಕ್ಕೆ ರಾಜ್ಯದ ಜನತೆಯನ್ನು ಸಂತುಷ್ಟವಾಗಿಡುವುದಕ್ಕಿಂತ ಕಾಂಗ್ರೆಸ್ ನೇತೃತ್ವದ ಇಂಡಿಯ ಮೈತ್ರಿಕೂಟದ ಭಾಗವಾಗಿರುವ ಡಿಎಮ್ ಕೆ ಸರ್ಕಾರವನ್ನು ಸಂತುಷ್ಟಪಡಿಸುವುದು ಹೆಚ್ಚು ಮುಖ್ಯವಾಗಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ತೇಜಸ್ವೀ ಸೂರ್ಯ ಹೇಳಿದರು.

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ವಸ್ತುಸ್ಥಿತಿ ಮಂಡಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress government) ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಂಸದ ತೇಜಸ್ವೀ ಸೂರ್ಯ (Tejasvi Surya) ಹೇಳುತ್ತಾರೆ. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಸೂರ್ಯ, ನೀರು ಹಂಚಿಕೆ ವಿವಾದವನ್ನು ಈಗ ಕೋರ್ಟ್ ಹೊರಗಡೆ ಇತ್ಯರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಯಾಕೆಂದರೆ ವಿವಾದವನ್ನು ಬಗೆಹರಿಸಲೆಂದೇ ಸುಪ್ರೀಮ್ ಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸಿದೆ, ಆದರೆ ಸಮಸ್ಯೆಯೆಂದರೆ ಪ್ರಾಧಿಕಾರದ ಮುಂದೆ ಕರ್ನಾಟಕ ಸರ್ಕಾರ; ರಾಜ್ಯ ಎದುರಿಸುತ್ತಿರುವ ಸಂಕಷ್ಟವನ್ನು ಸಮರ್ಪಕವಾಗಿ ವಿವರಿಸದ ಕಾರಣ ಮತ್ತು ಸರ್ಕಾರಕ್ಕೆ ರಾಜ್ಯದ ಜನತೆಯನ್ನು ಸಂತುಷ್ಟವಾಗಿಡುವುದಕ್ಕಿಂತ ಕಾಂಗ್ರೆಸ್ ನೇತೃತ್ವದ ಇಂಡಿಯ ಮೈತ್ರಿಕೂಟದ ಭಾಗವಾಗಿರುವ ಡಿಎಮ್ ಕೆ ಸರ್ಕಾರವನ್ನು ಸಂತುಷ್ಟಪಡಿಸುವುದು ಹೆಚ್ಚು ಮುಖ್ಯವಾಗಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ತೇಜಸ್ವೀ ಸೂರ್ಯ ಹೇಳಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಜೊತೆ ನಡೆದ ಸಭೆಯಲ್ಲಿ ಕರ್ನಾಟಕದ ಸದಸ್ಯರು ರಾಜ್ಯ ಸರ್ಕಾರದ ಪರವಾಗಿ ಮಾತಾಡಿದ್ದಾರೆ, ಮಿನಿಟ್ಸ್ ಆಫ್ ದಿ ಮೀಟಿಂಗ್ ತೆಗೆಸಿ ನೋಡಿದರೆ ಅದು ಗೊತ್ತಾಗುತ್ತದೆ. ಸರ್ವಪಕ್ಷ ಸಭೆ ಕರೆದಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸರ್ಕಾರದ ಜತೆ ಧ್ವನಿಗೂಡಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವ ರಾಜ್ಯಸರ್ಕಾರದ ಪ್ರತಿನಿಧಿಗಳು ಮಾಧ್ಯಮದವರ ಮುಂದೆ ಸಂಸದರು ರಾಜ್ಯದ ಪರವಾಗಿ ಮಾತಾಡುತ್ತಿಲ್ಲ ಅಂತ ದೂರುತ್ತಾರೆ ಎಂದು ತೇಜಸ್ವೀ ಸೂರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ