ಭಾರತೀಯ ಯೋಧರಲ್ಲಿ ಶಕ್ತಿ ತುಂಬಲು ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆ
ಅರಸೊತ್ತಿಗೆಯ ದಿನಗಳಲ್ಲಿ ಒಂದು ಸಾಮ್ರಾಜ್ಯ ಮತ್ತೊಂದು ಸಾಮ್ರಾಜ್ಯದ ಮೇಲೆ ಯುದ್ಧಕ್ಕೆ ಹೋದಾಗ ಪ್ರಜೆಗಳು ಶಕ್ತಿದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹೋಮ ಹವನಗಳನ್ನು ನಡೆಸುತ್ತಿದ್ದರಂತೆ. ಯುದ್ಧ ನಡೆಸುವ ಮಹಾರಾಜ ಮತ್ತು ಯೋಧರು ಗೆದ್ದು ಸುರಕ್ಷಿತವಾಗಿ ವಾಪಸ್ಸು ಬರಲಿ, ಸಾಮ್ರಾಜ್ಯ ವಿಸ್ತರಿಸಲಿ ಎನ್ನುವುದು ಹೋಮ, ಹವನ ಮತ್ತು ವಿಶೇಷ ಪೂಜೆಗಳ ಉದ್ದೇಶವಾಗಿತ್ತು.
ಬೆಂಗಳೂರು, ಮೇ 8: ಭಾರತದ ವಾಯುಸೇನೆಯು ನಿನ್ನೆ ಬೆಳಗಿನ ಜಾವ ಆಪರೇಷನ್ ಸಿಂಧೂರ್ ಅನ್ನು ಯಶಸ್ವೀಯಾಗಿ ನಡೆಸಿ ಉಗ್ರರ ಅಡುಗುದಾಣಗಳನ್ನು ಮಣ್ಣುಗೂಡಿಸಿದೆ. ಏತನ್ಮಧ್ಯೆ ಭಾರತೀಯ ಯೋಧರಲ್ಲಿ (Indian soldiers) ಶಕ್ತಿ ತುಂಬಲು ಮತ್ತು ಅವರನ್ನು ಆಪತ್ತುಗಳಿಂದ ಕಾಪಾಡಲು ನಗರದ ಶಕ್ತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ಮಾಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿಯೂ ಶಕ್ತಿವೃಕ್ಷದ ಕೆಳಗಡೆ ಹೋಮ, ಹವನ ನೆರವೇರಿಸಲಾಗುತ್ತಿದೆ. ನಮ್ಮ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿರುವ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು, ಯುದ್ಧದ ಸಮಯದಲ್ಲಿ ಶಕ್ರಿದೇವತೆ ದುರ್ಗೆಗೆ ಹೋಮ ಹವನಗಳನ್ನು ಮಾಡೋದು ರಾಜ ಮಹಾರಾಜರ ಕಾಲದಿಂದ ನಡೆದುಕೊಂಡಿರುವ ಪದ್ಧತಿ, ನಿನ್ನೆ ಉಗ್ರರ ನೆಲೆಗಳ ಮೇಲೆ ಭಾರತದ ಸೇನೆ ದಾಳಿ ನಡೆಸಿದ ಬಳಿಕ ಎಲ್ಲ ಶಕ್ತಿ ದೇವಸ್ಥಾನಗಳಲ್ಲಿ ಹೋಮ ಹವನ ನಡೆಸಬೇಕೆಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ, ನಾವೂ ಅಂಥ ಆದೇಶಕ್ಕಾಗಿ ಕಾಯುತ್ತಿದ್ದೆವು ಎಂದು ಹೇಳಿದರು.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಸಂಭ್ರಮ: ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಪೂಜೆ ಸಲ್ಲಿಸುವಂತೆ ಸೂಚನೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ