ಉತ್ತರ ಕರ್ನಾಟಕ ಭಾಗದ ಜಾತ್ರೆ, ಹಬ್ಬಗಳು ವಿಶೇಷವಾಗಿರುತ್ತವೆ. ವಿಜಯಪುರ ತಾಲೂಕಿನ ರಂಭಾಪುರ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆ ನಡೆಯುತ್ತದೆ. ಹಲವಾರು ತಲೆ ಮಾರುಗಳಿಂದ ನಡೆದುಕೊಂಡು ಬಂದ ಆಚರಣೆಯನ್ನು ಇಂದಿನ ತಲೆಮಾರಿನ ಯುವಕರು ಮುಂದುವರೆಸಿಕೊಂಡು ಬಂದಿದ್ದಾರೆ. ಹಿಂಗಾರು ಬೆಳೆಗಳನ್ನು ಕಟಾವು ಮಾಡಿ ರಾಶಿ ಮಾಡಿ ಫಸಲನ್ನು ಮನೆಗೆ ತಂದ ಬಳಿಕ ನಡೆಯುವ ಈ ಆಚರಣೆಯೇ ಬಲು ವಿಶಿಷ್ಟವಾಗಿದೆ.