Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮುಲು ಒಳ್ಳೆಯ ವ್ಯಕ್ತಿ ಮತ್ತು ಆತ್ಮೀಯ ಸ್ನೇಹಿತ, ಕಾಂಗ್ರೆಸ್​ಗೆ ಬಂದರೆ ಸ್ವಾಗತ: ಸಂತೋಷ್ ಲಾಡ್

ಶ್ರೀರಾಮುಲು ಒಳ್ಳೆಯ ವ್ಯಕ್ತಿ ಮತ್ತು ಆತ್ಮೀಯ ಸ್ನೇಹಿತ, ಕಾಂಗ್ರೆಸ್​ಗೆ ಬಂದರೆ ಸ್ವಾಗತ: ಸಂತೋಷ್ ಲಾಡ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 28, 2025 | 3:02 PM

ಕಾಂಗ್ರೆಸ್ ಪಕ್ಷವನ್ನು ಸಿಟಿ ಬಸ್ ಮತ್ತು ಡಬಲ್ ಡೆಕ್ಕರ್ ಗೆ ಹೋಲಿಸುವ ಸಚಿವ ಸಂತೋಷ್ ಲಾಡ್, ಇವುಗಳಿಗೆ ಬಾಗಿಲು ಇರೋದಿಲ್ಲ ಮತ್ತು ಎಲ್ಲ ಸ್ಟಾಪ್​ಗಳಲ್ಲಿ ನಿಲ್ಲುತ್ತವೆ, ಯಾರು ಬೇಕಾದರೂ ಹತ್ತಬಹುದು ಯಾರು ಬೇಕಾದರೂ ಇಳಿಯಬಹುದು ಎಂದು ಹೇಳಿದರು. ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಮಧ್ಯೆ ಜಗಳ ಶುರುವಾಗಿದ್ದಕ್ಕೆ ಏನೆಲ್ಲ ಉಪಕತೆಗಳು ಹುಟ್ಟಿಕೊಳ್ಳುತ್ತಿವೆ.

ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಮೊನ್ನೆಯಷ್ಟೇ ಬಿಜೆಪಿಗೆ ರೀ ಎಂಟ್ರಿ ಪಡೆದ ಗಾಲಿ ಜನಾನರ್ಧನ ರೆಡ್ಡಿ ವಿರುದ್ದ ಸಮರ ಸಾರಿರುವ ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ನಡುವೆ ಭಾರೀ ಸ್ನೇಹವಿದೆ. ರೆಡ್ಡಿ ಜೊತೆ ಜಗಳದ ಹಿನ್ನೆಲೆಯಲ್ಲಿ ಶ್ರೀರಾಮುಲು ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಹರಿದಾಡುತ್ತಿವೆ. ಇದೇ ಹಿನ್ನೆಲೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾಡ್, ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ, ಅವರು ನನ್ನ ಅತ್ಯಂತ ಆಪ್ತ ಸ್ನೇಹಿತ ಮತ್ತು ಬಹಳ ವಿನಮ್ರ ವ್ಯಕ್ತಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶ್ರೀರಾಮುಲು ಜೊತೆಗೆ 50 ಶಾಸಕರನ್ನು ಸಂಪರ್ಕಿಸಿದ್ದೆ; ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ