AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮಲತಾ ಮತ್ತು ವರಿಷ್ಠರ ನಡುವೆ ನಡೆದ ಮಾತುಕತೆ ಗೊತ್ತಿಲ್ಲ, ಅವರ ತೀರ್ಮಾನವೇ ಅಂತಿಮ: ಆರ್ ಅಶೋಕ

ಸುಮಲತಾ ಮತ್ತು ವರಿಷ್ಠರ ನಡುವೆ ನಡೆದ ಮಾತುಕತೆ ಗೊತ್ತಿಲ್ಲ, ಅವರ ತೀರ್ಮಾನವೇ ಅಂತಿಮ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 23, 2024 | 1:36 PM

ವಿಷಯ ಸ್ಪಷ್ಟವಾಗಿದೆ, ಸುಮಲತಾ ಅವರು ಮಂಡ್ಯ ಟಿಕೆಟ್ ಬಗ್ಗೆ ಕೇಂದ್ರದ ನಾಯಕರೊಂದಿಗೆ ಮಾತಾಡಿದ್ದಾರೆ. ಅವರ ನಡುವೆ ನಡೆದಿರುವ ಮಾತುಕತೆಯ ವಿವರ ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಅವರು ತೆಗೆದುಕೊಳ್ಳುವ ತೀರ್ಮಾನ ಬಗ್ಗೆ ಯಾವುದೇ ದೂಸ್ರಾ ಮಾತು ಇರಲ್ಲ ಎಂದು ಅಶೋಕ ಹೇಳಿದರು.

ಬೆಂಗಳೂರು: ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಕುರಿತು ರಾಜ್ಯದ ನಾಯಕರಿಗೆ ಏನೇ ಪ್ರಶ್ನೆ ಕೇಳಿದರು ಅವರಿಂದ ಹಾರಿಕೆಯ ಉತ್ತರ ಬರುತ್ತದೆ ಇಲ್ಲವೇ ಅದನ್ನು ಮೆತ್ತಗೆ ಕೇಂದ್ರದ ವರಿಷ್ಠರ ಮೇಲೆ ಜಾರಿಸಿಬಿಡುತ್ತಾರೆ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಅರ್ ಅಶೋಕ (R Ashoka), ಹಾರಿಕೆಯ ಉತ್ತರ ನೀಡುವ ಬದಲು ಬಾಲು ಈಗ ದೆಹಲಿ ವರಿಷ್ಠರ (party high command) ಕೋರ್ಟ್ ನಲ್ಲಿದೆ ಎಂದು ಹೇಳಿದರು. ಕೇಂದ್ರ ಸಂಸದೀಯ ಮಂಡಳಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ, ಅದಕ್ಕಿಂತ ಮಿಗಿಲಾಗಿ ತಾನೇನೂ ಹೇಳುವುದು ಸಾಧ್ಯವಿಲ್ಲ ಎಂದು ಅಶೋಕ ಹೇಳಿದರು. ವಿಷಯ ಸ್ಪಷ್ಟವಾಗಿದೆ, ಸುಮಲತಾ ಅವರು ಮಂಡ್ಯ ಟಿಕೆಟ್ ಬಗ್ಗೆ ಕೇಂದ್ರದ ನಾಯಕರೊಂದಿಗೆ ಮಾತಾಡಿದ್ದಾರೆ. ಅವರ ನಡುವೆ ನಡೆದಿರುವ ಮಾತುಕತೆಯ ವಿವರ ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಅವರು ತೆಗೆದುಕೊಳ್ಳುವ ತೀರ್ಮಾನ ಬಗ್ಗೆ ಯಾವುದೇ ದೂಸ್ರಾ ಮಾತು ಇರಲ್ಲ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೂ ಸುಮಲತಾ ಅಂಬರೀಶ್ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ: ಹನಕೆರೆ ಶಶಿಕುಮಾರ್