ಕಲಾವಿದರ ಸಂಘದಲ್ಲಿ ಪೂಜೆ, ಹೋಮ: ಪ್ರಮುಖ ನಟರೇ ಬಂದಿಲ್ಲ ಎಂದಿದ್ದಕೆ ಸುಮಲತಾ ಏನಂದ್ರು?

|

Updated on: Aug 14, 2024 | 4:51 PM

ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದ ಕಟ್ಟಡದಲ್ಲಿ ಅದ್ದೂರಿಯಾಗಿ ಪೂಜೆ, ಹೋಮ ಮಾಡಲಾಗಿದೆ. ಇದರಲ್ಲಿ ಬಹುತೇಕ ಕಲಾವಿದರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಪ್ರಮುಖ ಕಲಾವಿದರೇ ಗೈರಾಗಿದ್ದಾರೆ. ಈ ಕುರಿತು ನಟಿ ಸುಮಲತಾ ಅಂಬರೀಷ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದೇನು ತಿಳಿಯಲು ಈ ವಿಡಿಯೋ ನೋಡಿ..

ಕನ್ನಡ ಚಿತ್ರರಂಗಕ್ಕೆ ಈಗ ಕಷ್ಟ ಕಾಲ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾಗಳು ಗೆಲ್ಲುತ್ತಿಲ್ಲ. ಹಾಗಾಗಿ ಪೂಜೆ, ಹೋಮ ಮಾಡಿಸಲಾಗಿದೆ. ಇಂದು (ಆಗಸ್ಟ್​ 14) ಕಲಾವಿದರ ಸಂಘದಲ್ಲಿ ಹೋಮ ನಡೆದಿದೆ. ಇದರಲ್ಲಿ ಸುಮಲತಾ ಅಂಬರೀಷ್ ಭಾಗಿಯಾಗಿದ್ದಾರೆ. ಸ್ಯಾಂಡಲ್​ವುಡ್​ನ ಒಳಿತಿಗಾಗಿ ಈ ಪೂಜೆ ಮಾಡಲಾಗಿದ್ದರೂ ಕೂಡ ಪ್ರಮುಖ ಸ್ಟಾರ್​ ಕಲಾವಿದರು ಬಾರದೇ ಇರುವುದರ ಬಗ್ಗೆ ಸುಮಲತಾ ಮಾತನಾಡಿದ್ದಾರೆ. ‘ಇದು ಸ್ವಲ್ಪ ಬೇಜಾರಿನ ವಿಷಯ. ಅಂಬರೀಷ್​ ಅವರ 20 ವರ್ಷದ ಶ್ರಮದಿಂದ ಈ ಕಲಾವಿದರ ಭವನ ಆಗಿದೆ. ಅವರು ಅಷ್ಟು ಕಷ್ಟಪಟ್ಟಿದ್ದರು. ಇದು ರಾಜ್​ಕುಮಾರ್​ ಅವರ ಕನಸಾಗಿತ್ತು. ಕಲಾವಿದರೆಲ್ಲ ಇದನ್ನು ಬಳಸಿಕೊಳ್ಳಬೇಕು ಅಂತ ಅವರು ಹೇಳಿದ್ದರು. ಉಳಿದಿದ್ದು ಕಲಾವಿದರಿಗೆ ಬಿಟ್ಟಿದ್ದು’ ಎಂದು ಸುಮಲತಾ ಅಂಬರೀಷ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:35 pm, Wed, 14 August 24

Follow us on