AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಬಸ್​ಗಳೇ ಇಲ್ಲ: ನೂರಾರು ಪ್ರಯಾಣಿಕರು ಪರದಾಟ

ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಬಸ್​ಗಳೇ ಇಲ್ಲ: ನೂರಾರು ಪ್ರಯಾಣಿಕರು ಪರದಾಟ

ಶಿವಕುಮಾರ್ ಪತ್ತಾರ್
| Edited By: |

Updated on: Feb 24, 2024 | 7:42 PM

Share

ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರಿದ್ದರು ಸವದತ್ತಿ ಯಲ್ಲಮ್ಮನಗುಡ್ಡ ಕಡೆಗೆ ಬಸ್​ಗಳೆ ಇಲ್ಲ. ದಾವಣಗೆರೆ, ಹಾವೇರಿ ಬೇರೆ ಭಾಗಗಳಿಂದ ಬಂದು ನಾಲ್ಕೈದು ಗಂಟೆ ಕಾದರು ಬಸ್ ಬಂದಿಲ್ಲ. ನಿಮಗ್ಯಾರು ಬಾ ಅಂದಿದ್ದರು, ಬಸ್ ಇಲ್ಲ ಎಲ್ಲಿಂದ ಬಿಡೋದು ಅಂತ ಕಂಟ್ರೋಲರ್ ಜನರ ಮೇಲೆನೇ ಧಮಕಿ ಹಾಕುತ್ತಾರೆ.

ಧಾರವಾಡ, ಫೆಬ್ರವರಿ 24: ಭಾರತ ಹುಣ್ಣಿಮೆ ಎಫೆಕ್ಟ್ ಹಿನ್ನೆಲೆ ಬಸ್ ಇಲ್ಲದೆ ಜನರು ಪರದಾಡಿದ್ದಾರೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರಿದ್ದರು ಸವದತ್ತಿ (Savadatti) ಯಲ್ಲಮ್ಮನಗುಡ್ಡ ಕಡೆಗೆ ಬಸ್​ಗಳೇ ಇಲ್ಲ. ದಾವಣಗೆರೆ, ಹಾವೇರಿ ಬೇರೆ ಭಾಗಗಳಿಂದ ಬಂದು ನಾಲ್ಕೈದು ಗಂಟೆ ಕಾದರು ಬಸ್ ಬಂದಿಲ್ಲ. ನಿಮಗ್ಯಾರು ಬಾ ಅಂದಿದ್ದರು, ಬಸ್ ಇಲ್ಲ ಎಲ್ಲಿಂದ ಬಿಡೋದು ಅಂತ ಕಂಟ್ರೋಲರ್ ಜನರ ಮೇಲೆನೇ ಧಮಕಿ ಹಾಕುತ್ತಾರೆ. ಬಂದ ಮೂರ್ನಾಲ್ಕು ಬಸ್​ಗಳು ಪುಲ್ ಆಗಿವೆ. ಒಂದು ಬಸ್​​ಲ್ಲಿ 100 ರಿಂದ 120 ಪ್ರಯಾಣಿಕರಿರುತ್ತಾರೆ. ಭಾರತ ಹುಣ್ಣಿಮೆ ಇದೆ ಯಲ್ಲಮ್ಮನ ಗುಡ್ಡಕ್ಕೆ ಲಕ್ಷಾಂತರ ಜನ ಬರುತ್ತಾರೆ. ಹಾಗಾಗಿ ವ್ಯವಸ್ಥೆ ಮಾಡಬೇಕು ಅನ್ನುವ ಮುಂಜಾಗ್ರತೆ ಸಾರಿಗೆ ಸಂಸ್ಥೆ ಇಲ್ಲದಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Shivakumar Pattar
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More