ಸಿಡಿ ಫ್ಯಾಕ್ಟರಿ ನಡೆಸುತ್ತಿರುವ ಎರಡು ಕುಟುಂಬಗಳು ರಾಜ್ಯ ರಾಜಕಾರಣವನ್ನು ಹೊಲಸೆಬ್ಬಿಸಿವೆ: ಬಸನಗೌಡ ಪಾಟೀಲ್ ಯತ್ನಾಳ್

ಕಾಂಗ್ರೆಸ್ ಸರ್ಕಾರ ಆದೇಶಿಸಿದ ತನಿಖೆಗಳು ಯಾವತ್ತೂ ಪೂರ್ಣಗೊಳ್ಳಲ್ಲ, ಪಿಎಸ್ಐ ಅ ನೇಮಕಾತಿ ಹಗರಣ ನೆನೆಗುದಿಗೆ ಬಿದ್ದಿದೆ, ಇನ್ನೆರಡು ಪೊಕ್ಸೋ ಪ್ರಕರಣಗಳ ತನಿಖೆಯಾಗುತ್ತಿಲ್ಲ, ಎಸ್ ಐಟಿಯಲ್ಲಿ ಸರ್ಕಾರದ ಅಧಿಕಾರಿಗಳೇ ಇರೋದ್ರಿಂದ ತನಿಖೆ ಸರಿಯಾಗಿ ಆಗಲ್ಲ, ಹಾಗಾಗೇ ತಾನು ಪ್ರಕರಣನ್ನು ಸಿಬಿಐ ವಹಿಸಬೇಕೆಂದು ಆಗ್ರಹಿಸಿರುವೆ ಎಂದು ಯತ್ನಾಳ್ ಹೇಳಿದರು.

ಸಿಡಿ ಫ್ಯಾಕ್ಟರಿ ನಡೆಸುತ್ತಿರುವ ಎರಡು ಕುಟುಂಬಗಳು ರಾಜ್ಯ ರಾಜಕಾರಣವನ್ನು ಹೊಲಸೆಬ್ಬಿಸಿವೆ: ಬಸನಗೌಡ ಪಾಟೀಲ್ ಯತ್ನಾಳ್
|

Updated on: May 01, 2024 | 5:25 PM

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಮಾಡುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣವನ್ನು ಮುಚ್ಚಿಹಾಕಲು ಹೊಂದಾಣಿಕೆ ರಾಜಕಾರಣಿಗಳಿಂದ ವ್ಯವಸ್ಥಿತ ಸಂಚು (conspiracy) ನಡೆದಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಆದೇಶಿಸಿದ ತನಿಖೆಗಳು ಯಾವತ್ತೂ ಪೂರ್ಣಗೊಳ್ಳಲ್ಲ, ಪಿಎಸ್ಐ ಅ ನೇಮಕಾತಿ ಹಗರಣ ನೆನೆಗುದಿಗೆ ಬಿದ್ದಿದೆ, ಇನ್ನೆರಡು ಪೊಕ್ಸೋ ಪ್ರಕರಣಗಳ ತನಿಖೆಯಾಗುತ್ತಿಲ್ಲ, ಎಸ್ ಐಟಿಯಲ್ಲಿ ಸರ್ಕಾರದ ಅಧಿಕಾರಿಗಳೇ ಇರೋದ್ರಿಂದ ತನಿಖೆ ಸರಿಯಾಗಿ ಆಗಲ್ಲ, ಹಾಗಾಗೇ ತಾನು ಪ್ರಕರಣನ್ನು ಸಿಬಿಐ ವಹಿಸಬೇಕೆಂದು ಆಗ್ರಹಿಸಿರುವೆ ಎಂದು ಯತ್ನಾಳ್ ಹೇಳಿದರು. ರಾಜ್ಯದಲ್ಲಿ ಎರಡು ಸಿಡಿಗಳನ್ನು ತಯಾರಿಸುವ ಫ್ಯಾಕ್ಟರಿಗಳಿವೆ, ಒಂದರ ಹೆಸರನ್ನು ಕುಮಾರಸ್ವಾಮಿಯವರು ಹೇಳಿದ್ದಾರೆ, ಮತ್ತೊಂದು ಫ್ಯಾಕ್ಟರಿಯ ಹೆಸರನ್ನು ತಾನು 8 ನೇ ತಾರೀಖು ಬಹಿರಂಗಪಡಿಸುವುದಾಗಿ ಶಾಸಕ ಹೇಳಿದರು. ಈ ಎರಡು ಕುಟುಂಬಗಳು ಸೇರಿ ರಾಜ್ಯದ ರಾಜಕಾರಣವನ್ನು ಹೊಲಸೆಬ್ಬಿಸಿವೆ ಎಂದು ಅವರು ಹೇಳಿದರು. ಮೇ7 ರಂದು ರಾಜ್ಯದಲ್ಲಿ ಎರಡನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ, ಅದು ಕೊನೆಗೊಳ್ಳಲಿ ಅಂತ ಪ್ರಾಯಶಃ ಬಸನಗೌಡ ಯತ್ನಾಳ್ ಕಾಯುತ್ತಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಿರುವ ವಚನಾನಂದ ಸ್ವಾಮೀಜಿಗೆ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್

Follow us
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ