Kannada News » Videos » Uttara Kannada: Allegation of fraud in sugarcane weight; Farmers' outrage against EID sugar factory
ಉತ್ತರ ಕನ್ನಡ: ಕಬ್ಬಿನ ತೂಕದಲ್ಲಿ ಮೋಸ ಆರೋಪ; ಇಐಡಿ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ
TV9kannada Web Team | Edited By: Kiran Hanumant Madar
Updated on: Jan 25, 2023 | 5:20 PM
ಜಿಲ್ಲೆಯ ಹಳಿಯಾಳ ತಾಲೂಕಿನ ಇಐಡಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಕ್ವಿಂಟಲ್ ಕಬ್ಬಿನಲ್ಲಿ 10 ಕೆಜಿ ತೂಕ ಮೋಸ ಆಗುತ್ತಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ರೈತರು ದೂರು ನೀಡಿದ್ದಾರೆ.
ಉತ್ತರ ಕನ್ನಡ: ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿರುವ ಇಐಡಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಕ್ವಿಂಟಲ್ ಕಬ್ಬಿನಲ್ಲಿ 10 ಕೆಜಿ ತೂಕ ಮೋಸ ಆಗುತ್ತಿದೆ ಎಂದು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಂದೀಪ್ ಬೊಬಾಟೆಯವರು ಯಂತ್ರದ ಮೇಲೆ ಕ್ವಿಂಟಲ್ ಕಲ್ಲು ಇಟ್ಟು ಪರಿಶೀಲಿಸಿ, ಮೋಸ ಮಾಡುತ್ತಿರುವ ಕುರಿತು ಕಾರ್ಖಾನೆ ವಿರುದ್ಧ ರೈತರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.