AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್​​​ ಶೂ ತೆಗೆಯಿರಿ, ನಾನು ಇದೇ ಕಾರಣಕ್ಕೆ ಬರುವುದಿಲ್ಲ: ಪೂಜೆ ವೇಳೆ ಪಾದರಕ್ಷೆ ಬಿಡಲು ವೈಷ್ಣೋದೇವಿ ಮಂಡಳಿ ಹೆಚ್ಚುವರಿ ಸಿಇಒ ನಿರಾಕರಣೆ!

ಸರ್​​​ ಶೂ ತೆಗೆಯಿರಿ, ನಾನು ಇದೇ ಕಾರಣಕ್ಕೆ ಬರುವುದಿಲ್ಲ: ಪೂಜೆ ವೇಳೆ ಪಾದರಕ್ಷೆ ಬಿಡಲು ವೈಷ್ಣೋದೇವಿ ಮಂಡಳಿ ಹೆಚ್ಚುವರಿ ಸಿಇಒ ನಿರಾಕರಣೆ!

ಅಕ್ಷಯ್​ ಪಲ್ಲಮಜಲು​​
|

Updated on:Apr 08, 2026 | 1:23 PM

Share

ಜಮ್ಮುವಿನ SMVDSB ACEO, ವೈಷ್ಣೋದೇವಿ ಸ್ಮರಣಿಕೆ ಮಳಿಗೆ ಉದ್ಘಾಟನೆಯ ಪೂಜೆ ವೇಳೆ ಪಾದರಕ್ಷೆ ತೆಗೆಯಲು ನಿರಾಕರಿಸಿ ವಿವಾದಕ್ಕೆ ಸಿಲುಕಿದ್ದಾರೆ. ಪಂಡಿತರ ಮನವಿಗೂ ಮಣಿಯದೆ, ಶೂ ಧರಿಸಿಯೇ ಭಾಗವಹಿಸಲು ಮುಂದಾದ ಈ ಕ್ರಮ ಲಕ್ಷಾಂತರ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಅಗೌರವ ತೋರಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಮ್ಮು, ಏ.8 : ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್‌ನ (SMVDSB) ಹೆಚ್ಚುವರಿ ಸಿಇಒ (ACEO) ಅವರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ನಡೆದುಕೊಂಡ ರೀತಿ ಈಗ ಭಾರಿ ವಿವಾದಕ್ಕೆ ಈಡಾಗಿದೆ. ಮಂಡಳಿಯ ಹೊಸ ಸ್ಮರಣಿಕೆ ಮಳಿಗೆಯ (Souvenir Shop) ಉದ್ಘಾಟನಾ ಸಮಾರಂಭದ ಪೂಜಾ ವಿಧಿವಿಧಾನಗಳ ವೇಳೆ ಪಾದರಕ್ಷೆಗಳನ್ನು ತೆಗೆಯಲು ಅಧಿಕಾರಿ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಳಿಗೆಯ ಉದ್ಘಾಟನೆಗಾಗಿ ಅರ್ಚಕರು ಪೂಜೆ ನೆರವೇರಿಸುತ್ತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿ ಶೂ ಧರಿಸಿಯೇ ಪೂಜೆಯಲ್ಲಿ ಭಾಗವಹಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಪಂಡಿತರು (ಅರ್ಚಕರು), ಧಾರ್ಮಿಕ ನಿಯಮದಂತೆ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರುವಂತೆ ವಿನಂತಿಸಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿ, ತಾವು ಪಾದರಕ್ಷೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, “ಇದೇ ಕಾರಣಕ್ಕೆ ನಾನು ಇಂತಹ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಬರುವುದಿಲ್ಲ” ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ವೈಷ್ಣೋದೇವಿ ಮಂಡಳಿಯಲ್ಲೇ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಧಾರ್ಮಿಕ ನಂಬಿಕೆಗಳಿಗೆ ಗೌರವ ನೀಡದಿರುವುದು ಶೋಚನೀಯ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. “ಭಕ್ತಿ ಇಲ್ಲದಿದ್ದರೆ ಪರವಾಗಿಲ್ಲ, ಆದರೆ ಕನಿಷ್ಠ ಶಿಷ್ಟಾಚಾರ ಪಾಲಿಸಬೇಕಲ್ಲವೇ?” ಎಂದು ಅನೇಕರು ಪ್ರಶ್ನಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 08, 2026 01:22 PM
Follow Us