Mysuru Dasara: ಶಂಖ-ಚಕ್ರ, ಗಂಡಬೇರುಂಡ ಚಿತ್ತಾರ; ಅಭಿಮನ್ಯುಗೆ ಬಣ್ಣದ ಅಲಂಕಾರ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗಿಯಾಗಲಿರುವ ಗಜಪಡೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ಕಲಾವಿದ ನಾಗಲಿಂಗಪ್ಪ ನೇತೃತ್ವದ 8 ಜನರ ತಂಡ ಇದಕ್ಕಾಗಿ ಕೆಲಸ ಮಾಡಿದೆ. ಅಭಿಮನ್ಯು ಮೈಮೇಲೆ ಶಂಖ-ಚಕ್ರ, ಗಿಳಿ, ಗಂಡಬೇರುಂಡ ಚಿತ್ತಾರಗಳು ಮೂಡಿದ್ದು, ವಿಶೇಷ ವರ್ಣಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿವೆ.
ಮೈಸೂರು, ಅಕ್ಟೋಬರ್ 2: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಜಂಬೂ ಸವಾರಿಗೆ ಕೌಂಟ್ ಡೌನ್ ಶುರುವಾಗಿದೆ. ಕೂಂಬಿಂಗ್ ಕಿಂಗ್ ಅಭಿಮನ್ಯು ವಿಶೇಷ ವರ್ಣಾಲಂಕಾರದಿಂದ ಮಿರ ಮಿರ ಮಿಂಚುತಿದ್ದು, ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ 8 ಮಂದಿ ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ಅಭಿಮನ್ಯು ಮೈಮೇಲೆ ಶಂಖ-ಚಕ್ರ, ಗಿಳಿ, ಗಂಡಬೇರುಂಡ ಚಿತ್ತಾರಗಳು ಮೂಡಿದ್ದು, ಎಲ್ಲ ಆನೆಗಳಿಗೂ ವಿಶೇಷ ಅಲಂಕಾರ ಮಾಡಲಾಗಿದೆ. ಮೈ ಮೇಲೆ ಬಣ್ಣ ಬಳಿಯುತ್ತಿದ್ದರೂ ಅಭಿಮಾನ್ಯು ಕೂಲ್ ಆಗಿಯೇ ನಿಂತಿರುವ ದೃಶ್ಯ ಕಂಡುಬಂತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
