Video Viral: ತವಾಘಾಟ್-ಲಿಪುಲೇಖ್ ಹೆದ್ದಾರಿಯ ಗರ್ಬಾಧರ್‌ ಪರ್ವತ ಕುಸಿತ, ತಪ್ಪಿದ ಭಾರೀ ಅನಾಹುತ

ಇಂದು ಕೆಲಕಾಲ ರಸ್ತೆ ತೆರೆದಾಗ ಆದಿ ಕೈಲಾಸದ ಮೂರು ಮತ್ತು ನಾಲ್ಕನೇ ತಂಡದ ಪ್ರಯಾಣಿಕರು ಹಾಗೂ ಇತರೆ ವಾಹನಗಳ ಸಂಚಾರ ಆರಂಭವಾಗುತ್ತಿದ್ದಂತೆ ದಿಢೀರ್ ಗುಡ್ಡ ಬಿರುಕು ಬಿಟ್ಟು, ಕುಸಿಯಲು ಶುರುವಾಗಿದೆ.

ಡೆಹ್ರಡೂನ್: ಉತ್ತರಾಖಂಡದ  ಧಾರ್ಚುಲಾ-ತವಾಘಾಟ್-ಲಿಪುಲೇಖ್ ರಾಷ್ಟ್ರೀಯ ಹೆದ್ದಾರಿಯ ಗರ್ಬಧರ್‌ನಲ್ಲಿ ಗುಡ್ಡವೊಂದು ಇಂದು (ಮೇ15) ಹಠಾತ್ತನೆ ಬಿರುಕು ಬಿಟ್ಟಿದ್ದು. ಗುಡ್ಡದಿಂದ ಅಪಾರ ಪ್ರಮಾಣದ ಅವಶೇಷಗಳು ಮತ್ತು ಬಂಡೆಗಳು ಬಿದ್ದಿದೆ, ಇದನ್ನು ಕಂಡು ಅಲ್ಲಿದ್ದ ಜನರಲ್ಲಿ ಆತಂಕ ಮನೆಮಾಡಿದೆ. ಇದೇ ವೇಳೆ ಅಲ್ಲಿಂದ ಜನರು ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇದೀಗ ತವಾಘಾಟ್-ಲಿಪುಲೇಖ್ ಮೋಟಾರು ಮಾರ್ಗಕ್ಕೆ ಅವಶೇಷಗಳು ಬಿದ್ದು ದಾರಿ ಮುಚ್ಚ ಹೋಗಿದೆ.

ಕಳೆದ ನಾಲ್ಕು ದಿನಗಳಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಆದರೆ ಇಂದು (ಮೇ15) ರಸ್ತೆ ತೆರೆಯುವಾಗ ಈ ಘಟನೆ ನಡೆದಿದೆ. ಆದಿ ಕೈಲಾಶ್‌ನ ಮೂರು ಮತ್ತು ನಾಲ್ಕನೇ ಗುಂಪಿನ ಪ್ರಯಾಣಿಕರು ಮತ್ತು ಇತರ ವಾಹನಗಳ ಸಂಚಾರ ಪ್ರಾರಂಭವಾಗಿದೆ. ಆದರೆ ಇದ್ದಕ್ಕಿದ್ದಂತೆ ಗುಡ್ಡ ಬಿರುಕು ಬಿಟ್ಟಿದ್ದು. ಈ ಸಮಯದಲ್ಲಿ ಯಾವುದೇ ಪ್ರಯಾಣಿಕರು ಆ ಸ್ಥಳದಲ್ಲಿ ಹಾದು ಹೋಗಿಲ್ಲ, ರಸ್ತೆಯನ್ನು ಮುಚ್ಚಿದ್ದರಿಂದ ಪ್ರಯಾಣಿಕರು ಧಾರ್ಚುಲಾಗೆ ಮರಳಿದ್ದಾರೆ.

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us