ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ

|

Updated on: Oct 18, 2024 | 4:41 PM

ದರ್ಶನ್ ತೂಗುದೀಪ ಜೈಲು ಸೇರಿ ನಾಲ್ಕು ತಿಂಗಳಾಯ್ತು, ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿ 50 ದಿನಗಳಾಯ್ತು. ಈವರೆಗೆ ದರ್ಶನ್​ಗೆ ಜಾಮೀನು ದೊರಕಿಲ್ಲ. ಜಾಮೀನು ಅರ್ಜಿ ವಜಾ ಆದ ಬಳಿಕ ಮೊದಲ ಬಾರಿಗೆ ಪತ್ನಿ ಹಾಗೂ ಸಹೋದರ ದಿನಕರ್ ದರ್ಶನ್ ಕಾಣಲು ಬಂದಿದ್ದರು. ಈ ವೇಳೆ ಬೇಸರದಿಂದಲೇ ಬಂದರು ದರ್ಶನ್.

ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡು 50 ದಿನಗಳಾಗಿವೆ. ಆದರೆ ಈ ವರೆಗೆ ಜಾಮೀನು ಲಭಿಸಿಲ್ಲ. ಸಿಸಿಎಚ್ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದೆ. ಇದೀಗ ದರ್ಶನ್ ಹೈಕೋರ್ಟ್​ಗೆ ಅರ್ಜಿ ಹಾಕಿದ್ದಾರಾದರೂ ಅಲ್ಲಿಯೂ ಸಹ ಜಾಮೀನು ಸಿಗುವ ನಿರೀಕ್ಷೆ ಇಲ್ಲ. ಹೈಕೋರ್ಟ್​ನಲ್ಲಿ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಜಾಮೀನು ಅರ್ಜಿ ವಜಾ ಆದ ಬಳಿಕ ಮೊದಲ ಬಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಆಗಮಿಸಿದ್ದರು. ಈ ವೇಳೆ ತುಸು ಬೇಸರದಲ್ಲಿಯೇ ದರ್ಶನ್ ಆಗಮಿಸಿದರು. ಅವರು ಎರಡು ಚೀಲದಲ್ಲಿ ತಂದಿದ್ದ ಬಟ್ಟೆ, ಡ್ರೈಫ್ರೂಟ್ಸ್ ಇನ್ನಿತರೆಗಳನ್ನು ಎತ್ತಿಕೊಂಡು ತಮ್ಮ ಬ್ಯಾರಕ್​ಗೆ ಹೋದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on