ನನ್ನನ್ನು ಸೋಲಿಸಲು ನಿರಾಣಿ ಕಳಿಸುವ ದುಡ್ಡು ತೆಗೆದುಕೊಂಡು ವಿಜಯಪುರದ ಮತದಾರ ನನಗೆ ವೋಟು ಹಾಕುತ್ತಾನೆ: ಬಸನಗೌಡ ಯತ್ನಾಳ್
ತಮ್ಮನ್ನು ಸೋಲಿಸಲು ನಿರಾಣಿ, ಬಿವೈ ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ದುಡ್ಡು ಕಳಿಸಲಿದ್ದು ವಿಜಯಪುರದ ಜನ ಅವರಿಂದ ಹಣ ಪಡೆದು ತಮಗೆ ವೋಟು ಹಾಕುವುದು ನಿಶ್ಚಿತ ಎಂದು ಯತ್ನಾಳ್ ಹೇಳಿದರು.
ವಿಜಯಪುರ: ರಾಜ್ಯ ಬಿಜೆಪಿಯ ಪ್ರಮುಖ ನಾಯಕರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಮುರುಗೇಶ್ ನಿರಾಣಿ ನಡುವೆ ಪೂರ್ಣಪ್ರಮಾಣ ಯುದ್ಧ ಘೋಷಣೆ ಆದಂತಿದೆ, ಯಾಕೆ ಅಂತ ಗೊತ್ತಿಲ್ಲ. ಯತ್ನಾಳ್ ತಮ್ಮ ಪಕ್ಷದವರ ವಿರುದ್ಧವೂ ಹರಿಹಾಯುವುದು ಗೊತ್ತಿರುವ ಸಂಗತಿ. ನಿರಾಣಿ ಸಿಡಿ ರಿಲೀಸ್ ಮಾಡುವುದಾಗಿ ಹೆದರಿಸಿದ್ದು ಯತ್ನಾಳ್ ರನ್ನು ಕೆರಳಿಸಿದೆ. ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತಾಡುವಾಗ ನಿರಾಣಿ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನಿರಾಣಿ ನಿಜಕ್ಕೂ ಅವರಪ್ಪನಿಗೆ ಹುಟ್ಟಿದ್ದರೆ ಸಿಡಿ ಬಿಡುಗಡೆ ಮಾಡಲಿ ಅಂತ ಸವಾಲು ಹಾಕಿದರು. ತಮ್ಮನ್ನು ಸೋಲಿಸಲು ನಿರಾಣಿ, ಬಿವೈ ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ದುಡ್ಡು ಕಳಿಸಲಿದ್ದು ವಿಜಯಪುರದ ಜನ ಅವರಿಂದ ಹಣ ಪಡೆದು ತಮಗೆ ವೋಟು ಹಾಕುವುದು ನಿಶ್ಚಿತ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

