ಬಳ್ಳಾರಿ: ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತೆಲೆ ಚೆಚ್ಚಿಕೊಂಡ ಸಂಡೂರು ಶಾಸಕ

|

Updated on: Apr 02, 2023 | 12:58 PM

ಸಂಡೂರು ಕಾಂಗ್ರೆಸ್​ ಶಾಸಕ ಈ. ತುಕಾರಾಂ ಅವರಿಗೆ ಜಿಲ್ಲೆಯ ಸಂಡೂರು ತಾಲೂಕಿನ ಕುಡುತಿನಿ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳ್ಳಾರಿ: ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆ ನಯಕರು ಮತಯಾಚನೆಗೆ ತಮ್ಮ ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ. ಈ ವೇಳೆ ಮತದಾರರು ತಮ್ಮ ಶಾಸಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್​ ಆಗುತ್ತಿರುತ್ತವೆ. ಅದರಂತೆ ಈಗ ಸಂಡೂರು (Sanduru) ಕಾಂಗ್ರೆಸ್​ ಶಾಸಕ ಈ. ತುಕಾರಾಂ (Congress MLA Tukaram) ಅವರಿಗೆ ಜಿಲ್ಲೆಯ ಸಂಡೂರು ತಾಲೂಕಿನ ಕುಡುತಿನಿ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ತುಕಾರಾಂ ಅವರು ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ್ದ ವೇಳೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಬರೀ ಹಿಂಬಾಲಕರ ಏಳಿಗೆ ಮಾಡಿದ್ದೀರಿ. ಹಿಂಬಾಲಕರ ಮತ ಸಾಕು, ನಮ್ಮ ವೋಟು ನಿಮಗ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಗ್ರಾಮಸ್ಥರ ಪ್ರಶ್ನೆಗೆ ಕಾಂಗ್ರೆಸ್​​​ ಶಾಸಕ ತುಕಾರಾಂ ತಲೆಚಚ್ಚಿಕೊಂಡಿದ್ದಾರೆ. ಕಾರಾಂಗೆ ಕ್ಲಾಸ್​​ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.