‘ಪುನೀತ್​ ಸರ್ ಫೋಟೋ ಹಾಕಿಲ್ಲ, ತುಂಬ ಬೇಜಾರಾಯ್ತು’: ತಮ್ಮದೇ ಚಿತ್ರತಂಡದ ವಿರುದ್ಧ ವಿನೋದ್​ ಪ್ರಭಾಕರ್​ ಗರಂ

| Updated By: ಮದನ್​ ಕುಮಾರ್​

Updated on: Feb 12, 2022 | 2:14 PM

‘ಪುನೀತ್​ ಸರ್​ಗೆ ನಮನ ಅಂತ ಒಂದೇ ಒಂದು ಫೋಟೋ ಕೂಡ ಈ ಟ್ರೇಲರ್​ನಲ್ಲಿ ಹಾಕಿಲ್ಲ. ಅದರಿಂದ ಖುದ್ದಾಗಿ ನನಗೆ ತುಂಬ ಬೇಸರವಾಗಿದೆ’ ಎಂದು ವಿನೋದ್​ ಪ್ರಭಾಕರ್​ ಹೇಳಿದ್ದಾರೆ.

ಖ್ಯಾತ ನಟ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ ‘ವರದ’ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿನೋದ್​ ಪ್ರಭಾಕರ್​ ಅವರು ತಮ್ಮದೇ ಚಿತ್ರತಂಡದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ನೇರವಾಗಿ ಹೇಳಿದ್ದಾರೆ. ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನದ ನಂತರ ಅನೇಕ ಚಿತ್ರತಂಡಗಳು ಅವರಿಗೆ ನಮನ ಸಲ್ಲಿಸುತ್ತಿವೆ. ಆದರೆ ‘ವರದ’ (Varada Kannada Movie) ಸಿನಿಮಾದ ಟ್ರೇಲರ್​ನಲ್ಲಿ ಅದು ಕಾಣಿಸಿಲ್ಲ. ಆ ಕಾರಣಕ್ಕೆ ವಿನೋದ್​ ಪ್ರಭಾಕರ್​ ಕೋಪಗೊಂಡಿದ್ದಾರೆ. ‘ಟ್ರೇಲರ್​ ನೋಡಿ ನನಗೆ ನಿಜಕ್ಕೂ ಬೇಜಾರಾಯ್ತು. ಪುನೀತ್​ ಸರ್​ಗೆ ನಮನ ಅಂತ ಒಂದೇ ಒಂದು ಫೋಟೋ ಕೂಡ ಇದರಲ್ಲಿ ಹಾಕಿಲ್ಲ. ಅದರಿಂದ ಖುದ್ದಾಗಿ ನನಗೆ ತುಂಬ ಬೇಸರವಾಗಿದೆ. ಯಾಕೆ ಹೀಗಾಯ್ತು ಅಂತ ಈಗ ಕಾರಣ ಹೇಳೋಕೆ ಹೋದರೆ ಅದು ಎಲ್ಲೆಲ್ಲೋ ಹೋಗುತ್ತದೆ. ಟ್ರೇಲರ್​ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ’ ಎಂದು ವಿನೋದ್​ ಪ್ರಭಾಕರ್​ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ‘ವರದ’ ಚಿತ್ರತಂಡದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಈ ಚಿತ್ರಕ್ಕೆ ಉದಯ್​ ಪ್ರಕಾಶ್​ ನಿರ್ದೇಶನ ಮಾಡಿದ್ದಾರೆ. ಅಮಿತಾ ರಂಗನಾಥ್​, ಚರಣ್​ ರಾಜ್​, ಅನಿಲ್​ ಸಿದ್ದು, ಅಶ್ವಿನಿ ಗೌಡ, ಎಂ.ಕೆ. ಮಠ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

‘ಪರಭಾಷೆಯ ಯಾವ ಚಿತ್ರಕ್ಕೂ ಕಮ್ಮಿ ಇಲ್ಲ ಜೇಮ್ಸ್​ ಟೀಸರ್​’; ಹಾಡಿ ಹೊಗಳಿದ ಪುನೀತ್​ ಫ್ಯಾನ್ಸ್​

ಪರಭಾಷೆಯಲ್ಲೂ ‘ಜೇಮ್ಸ್​’ ಟೀಸರ್​ ಮಿಲಿಯನ್​ ವೀಕ್ಷಣೆ; ತಮಿಳು, ಹಿಂದಿ, ತೆಲುಗು ಪ್ರೇಕ್ಷಕರು ಏನಂದ್ರು?

Follow us on