ತಿರುಪತಿ ತಿಮ್ಮಪ್ಪನ ಸೇವೆಗೆ ಬಳಸುವ ಪುನುಗು ಬೆಕ್ಕು ಬೋನಿನಲ್ಲಿ ಸಿಕ್ಕಿಬಿತ್ತು! ವಿಡಿಯೋ ವೈರಲ್ ಆಯ್ತು!
Viverridae: ಈ ಬೆಕ್ಕಿನ ದೇಹದಲ್ಲಿರುವ ಗ್ರಂಥಿಗಳಿಂದ ಬರುವ ಬೆವರು ಒಣಗಿದಾಗ ಎಣ್ಣೆಯಂತೆ ಅಂಟಿಕೊಂಡಿರುತ್ತದೆ.. ಸುಗಂಧ ಪರಿಮಳವನ್ನು ಸೂಸುತ್ತದೆ.. ಅದಕ್ಕಾಗಿಯೇ ಈ ಎಣ್ಣೆಯನ್ನು ತಿರುಮಲ ಶ್ರೀವಾರಿಯ (ತಿರುಪತಿ ತಿಮ್ಮಪ್ಪನ) ಸೇವೆಗೆ ಬಳಸಲಾಗುತ್ತದೆ. ಶ್ರೀನಿವಾಸನ ಅಭಿಷೇಕ ಮುಗಿದ ನಂತರ ಈ ಪುನುಗು ಬೆಕ್ಕಿನ ಎಣ್ಣೆಯನ್ನು ಶ್ರೀಗಳ ತಲೆಯಿಂದ ಪಾದದವರೆಗೆ ಹಚ್ಚಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಬೆಕ್ಕುಗಳನ್ನು ಟಿಟಿಡಿ ವಿಶೇಷವಾಗಿ ಸಾಕುತ್ತಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅಪರೂಪದ ಬೆಕ್ಕು ಕಾಣಿಸಿಕೊಂಡಿದೆ. ಶೇಷಾಚಲಂ ಮತ್ತು ನಲ್ಲಮಲ ಅರಣ್ಯದಲ್ಲಿ ಕಂಡುಬರುವ ಈ ಅಪರೂಪದ ಪ್ರಾಣಿ ಗಂಗನಮ್ಮಕೋಡು ಪ್ರದೇಶದ ಈಲಿ ರಮೇಶ್ ಎಂಬುವವರ ಮನೆಯ ಆವರಣದಲ್ಲಿ ಪತ್ತೆಯಾಗಿದೆ. ಇಲಿ, ಹಂದಿಗಳನ್ನು ಹಿಡಿಯಲು ಹಾಕಿದ್ದ ಬೋನಿಗೆ ಪುನುಗು ಬೆಕ್ಕು ಸಿಕ್ಕಿಹಾಕಿಕೊಂಡಿದೆ. ಬೆಳಗ್ಗೆ ಬೋನಿನಲ್ಲಿದ್ದ ಈ ಪ್ರಾಣಿಯನ್ನು ನೋಡಿ ರಮೇಶ್ ಅವರ ಕುಟುಂಬಸ್ಥರು ಆಶ್ಚರ್ಯಚಕಿತರಾದರು. ವಿಷಯ ತಿಳಿದ ಸ್ಥಳೀಯರು ಅದನ್ನು ಪುನುಗು ಬೆಕ್ಕುಎಂದು ಗುರುತಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಈ ಬೆಕ್ಕಿನ ದೇಹದಲ್ಲಿರುವ ಗ್ರಂಥಿಗಳಿಂದ ಬರುವ ಬೆವರು ಒಣಗಿದಾಗ ಎಣ್ಣೆಯಂತೆ ಅಂಟಿಕೊಂಡಿರುತ್ತದೆ.. ಸುಗಂಧ ಪರಿಮಳವನ್ನು ಸೂಸುತ್ತದೆ.. ಅದಕ್ಕಾಗಿಯೇ ಈ ಎಣ್ಣೆಯನ್ನು ತಿರುಮಲ ಶ್ರೀವಾರಿಯ (ತಿರುಪತಿ ತಿಮ್ಮಪ್ಪನ) ಸೇವೆಗೆ ಬಳಸಲಾಗುತ್ತದೆ. ಶ್ರೀನಿವಾಸನ ಅಭಿಷೇಕ ಮುಗಿದ ನಂತರ ಈ ಪುನುಗು ಬೆಕ್ಕಿನ ಎಣ್ಣೆಯನ್ನು ಶ್ರೀಗಳ ತಲೆಯಿಂದ ಪಾದದವರೆಗೆ ಹಚ್ಚಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಬೆಕ್ಕುಗಳನ್ನು ಟಿಟಿಡಿ ವಿಶೇಷವಾಗಿ ಸಾಕುತ್ತಿದೆ. ತಿರುಮಲದ ಗೋಶಾಲೆಯಲ್ಲಿ ಪುನುಗು ಬೆಕ್ಕುಗಳನ್ನು ಸಾಕಲಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್ ಸ್ಪೈಡಿ ಕ್ಯಾಚ್ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

