AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಕ್ಷಿತವಾಗಿ ವಾಪಸ್ಸು ಕರೆತಂದ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದ: ಕಾಶ್ಮೀರ ತೆರಳಿದ್ದ ಬೆಂಗಳೂರು ನಿವಾಸಿ

ಸುರಕ್ಷಿತವಾಗಿ ವಾಪಸ್ಸು ಕರೆತಂದ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದ: ಕಾಶ್ಮೀರ ತೆರಳಿದ್ದ ಬೆಂಗಳೂರು ನಿವಾಸಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2025 | 3:28 PM

ತಾವು ಸುರಕ್ಷಿತವಾಗಿ ಕರ್ನಾಟಕಕ್ಕೆ ವಾಪಸ್ಸು ಹೋಗುತ್ತೇವೆಯೋ ಇಲ್ಲವೋ ಎಂಬ ಸಂದೇಹ ತಮ್ಮ ತಂಡವನ್ನು ಕಾಡಲಾರಂಭಿಸಿತ್ತು ಎಂದು ಮೋನಿಕ ಹೇಳುತ್ತಾರೆ. ಬೆಂಗಳೂರಲ್ಲಿ ಕಾಲಿಟ್ಟ ನಂತರ ನಿರಾಳರಾಗಿರುವ ಅವರು ಕರ್ನಾಟಕ ಮತ್ತು ಬೆಂಗಳೂರಷ್ಟು ಒಳ್ಳೇ ಮತ್ತು ಸುಂದರ ಸ್ಥಳಗಳು ಬೇರೆಲ್ಲೂ ಇಲ್ಲ, ಇಲ್ಲಿನ ಜನ ಕೂಡ ಬಹಳ ಚೆನ್ನಾಗಿದ್ದಾರೆ ಎಂದು ಹೇಳುತ್ತಾರೆ.

ದೇವನಹಳ್ಳಿ, ಏಪ್ರಿಲ್ 24: ಪ್ರವಾಸಕ್ಕೆಂದು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಿಗೆ ತೆರಳಿದ್ದ 174 ಕನ್ನಡಿಗರನ್ನು ಶ್ರೀನಗರದಿಂದ ಸುರಕ್ಷಿತವಾಗಿ ಕರೆತರಲಾಗಿದೆ. ವಿಮಾನ ನಿಲ್ದಾಣದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಮೋನಿಕ ಸತ್ಯ (Monica Sathya) ಹೆಸರಿನ ಮಹಿಳೆ ತಮ್ಮನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿದ್ದಕ್ಕೆ ಸಿದ್ದರಾಮಯ್ಯ ಸರ್ಕಾರ, ಸಚಿವ ಸಂತೋಷ್ ಲಾಡ್ ಮತ್ತು ಅಧಿಕಾರಿ ವರ್ಗಕ್ಕೆ ಧನ್ಯವಾದ ಸಲ್ಲಿಸಿದರು. ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದಾಗ ಮೋನಿಕ ಅವರ ತಂಡ ಗುಲ್ ಮೊಹರ್​ನಲ್ಲಿತ್ತಂತೆ. ಅಸಲಿಗೆ ಉಗ್ರರು ಗುಲ್ ಮೊಹರ್ ಅನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು, ಆದರೆ ಅಲ್ಲಿನ ಬಿಗಿ ಭದ್ರತೆ ಹಿನ್ನೆಲೆ ತಮ್ಮ ಯೋಜನೆ ಬದಲಾಯಿಸಿದರು ಎಂದು ಮೋನಿಕ ಹೇಳುತ್ತಾರೆ.

ಇದನ್ನೂ ಓದಿ:  Pahalgam Terrorist Attack: ಪಹಲ್ಗಾಮ್ ಉಗ್ರ ದಾಳಿ, ಸರ್ವಪಕ್ಷ ಸಭೆ ಕರೆದ ಪ್ರಧಾನಿ ಮೋದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ