ನೇಹಾ ಹಿರೇಮಠ ಹತ್ಯೆಯಂಥ ಘೋರ ಕೃತ್ಯ ನಡೆದರೆ ಕೈಕಟ್ಟಿ ಮನೇಲಿ ಕೂರಲಾಗುತ್ತಾ? ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ

Updated on: Apr 23, 2024 | 6:07 PM

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವ ನಿರ್ಧಾರ ಮಾಡಿರುವುದನ್ನು ವಿಜಯೇಂದ್ರ ತಮ್ಮ ಮಾತಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚುತ್ತಾರೆ. ಇಂದು ನೇಹಾ ತಂದೆಗೆ ಸಿದ್ದರಾಮಯ್ಯ ಫೋನಲ್ಲಿ ವೆರಿ ಸಾರಿ ಅಂತಲೂ ಹೇಳಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ನೇಹಾ ಹಿರೇಮಠ (Neha Hiremath) ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿವೈ ವಿಜಯೇಂದ್ರ (BY Vijayendra) ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸವನ್ನು ಯಾವತ್ತೂ ನಿಲ್ಲಿಸುವುಸದಿಲ್ಲ ಎಂದು ಹೇಳಿದರು. ಹಿಂದೆ, ಅಖಂಡ ಶ್ರೀನಿವಾಸಮೂರ್ತಿ (Akhanda Srinivas Murthy) ಅವರ ಮನೆಗೆ ನುಗ್ಗಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾಗಲೂ ಆಗ ಅಧಿಕಾರದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ ಶಾಸಕನ ರಕ್ಷಣೆ ನಿಲ್ಲದೆ ದುಷ್ಕೃತ್ಯ ನಡೆಸಿದ ಅಲ್ಪಸಂಖ್ಯಾತ ಸಮುದಾಯದ ಜನರ ಜೊತೆ ನಿಂತಿತ್ತು ಎಂದು ಹೇಳಿದರು. ಈಗ ನೇಹಾ ಹಿರೇಮಠ ಪ್ರಕರಣದಲ್ಲೂ ಅದೇ ಆಗುತ್ತಿದೆ. ಮುಖ್ಯಮಂತ್ರಿ ಮತ್ತು ಅವರ ಸಚಿವರ ಸಂವೇದನೆರಹಿತ ಹೇಳಿಕೆಗಳು ಸರ್ಕಾರದ ನಿಲುವಿಗೆ ಸಾಕ್ಷಿಯಾಗಿವೆ ಎಂದ ವಿಜಯೇಂದ್ರ, ತಮ್ಮ ಪಕ್ಷ ಈ ಪ್ರಕರಣವನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ, ನಾವೂ ಮನುಷ್ಯರು ಮತ್ತು ನಮ್ಮಲ್ಲೂ ಮಾನವೀಯತೆ ಇದೆ, ಇಂಥದೊಂದು ಘೋರ ಘಟನೆ ನಡೆದಾಗ ಮನೆಗಳಲ್ಲಿ ಕೈಕಟ್ಟಿಕೊಂಡು ಕೂರಲಾಗುತ್ತಾ ಎಂದು ಪ್ರಶ್ನಿಸಿದರು.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವ ನಿರ್ಧಾರ ಮಾಡಿರುವುದನ್ನು ವಿಜಯೇಂದ್ರ ತಮ್ಮ ಮಾತಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚುತ್ತಾರೆ. ಇಂದು ನೇಹಾ ತಂದೆಗೆ ಸಿದ್ದರಾಮಯ್ಯ ಫೋನಲ್ಲಿ ವೆರಿ ಸಾರಿ ಅಂತಲೂ ಹೇಳಿದ್ದಾರೆ. ಸಿಐಡಿ ತನಿಖೆಗೆ ಒಪ್ಪಿಸಿರುವುದನ್ನು ಖುದ್ದು ಮಾಜಿ ಮುಖ್ಯಮಂತ್ರಿ ಬಿಎಸ್ ಯುಡಿಯೂರಪ್ಪ ಸ್ವಾಗತಿಸಿದ್ದರೆ ವಿಜಯೇಂದ್ರ ಸಿಬಿಐ ತನಿಖೆಯಾಗಬೇಕು ಅನ್ನುತ್ತಾರೆ. ಇದು ರಾಜಕಾರಣವಲ್ಲವೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಶಾಸಕ ಯತ್ನಾಳ್ ವಾಗ್ದಾಳಿ

Loading...
Unable to load recommendations.
Follow Us